ಕುಶ್ಮಿತಾ ಶಿರಾಜೆಗೆ ಅರಳು ಮಲ್ಲಿಗೆ ಪ್ರಶಸ್ತಿ ಪ್ರದಾನ

0

ಶ್ರೀ ಜ್ಞಾನ ಮಂದಾರ ಟ್ರಸ್ಟ್( ರಿ) ಬೆಂಗಳೂರು, ಶಿಕ್ಷಕಿಯರ ತರಬೇತಿ ಕೇಂದ್ರ ಮತ್ತು ಜ್ಞಾನಶ್ರೀ ಕಿಡ್ಸ್ ಫ್ರೀ ಸ್ಕೂಲ್ ಮುಡಿಪು ಇದರ
ಆಶ್ರಯದಲ್ಲಿ ಕನ್ನಡ ಕಲಾ ಪ್ರತಿಬೋತ್ಸವ – 2023 ಕಾರ್ಯಕ್ರಮ ಶಾರದ ವಿದ್ಯಾಲಯ ಮಂಗಳೂರಿನಲ್ಲಿ ಜ. 22 ರಂದು ನಡೆಯಿತು.

ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಂದ್ರಕಲಾ ನಾರಾಯಣ ಶಿರಾಜೆ, ಪಂಜ ಇವರ ಮಗಳು
ಕು.ಕುಶ್ಮಿತಾ ಶಿರಾಜೆ ಯವರ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಲ್ಲಿಸುತಿರುವ ಅನುಪಮಾ ಸೇವೆಯನ್ನು ಹಾಗೂ ಆವರ ಅದ್ಬುತ ಚಿತ್ರಕಲೆಯನ್ನು ಗುರುತಿಸಿ ಅರಳುಮಲ್ಲಿಗೆ ರಾಜ್ಯ ಪುರಸ್ಕಾರ ನೀಡಿ ಗೌರವಿಸಲಾಯಿತು.