ರೆಂಜಾಳ: ಜಾತ್ರೋತ್ಸವ ಪ್ರಯುಕ್ತ ಗೊನೆಮುಹೂರ್ತ

0

ಮರ್ಕಂಜ ಗ್ರಾಮದ ರೆಂಜಾಳ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ಜನವರಿ 24ರಿಂದ 31ರವರೆಗೆ ಜಾತ್ರೋತ್ಸವವು ನಡೆಯಲಿದ್ದು, ಇಂದು ಗೊನೆ ಮುಹೂರ್ತ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಘವ ಗೌಡ ಕಂಜಿಪಿಲಿ, ಸದಸ್ಯರಾದ ರಾಜೇಶ್ವರಿ ಕುಮಾರಸ್ವಾಮಿ, ಸೇವಾ ಸಮಿತಿ ಅಧ್ಯಕ್ಷ ಪುಟ್ಟಣ್ಣ ಗೌಡ ಬಾಣೂರು, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಮನೋಹರ ರೈ ಹೈದಂಗೂರು, ಅರ್ಚಕರಾದ ಸುಬ್ರಹ್ಮಣ್ಯ ಭಟ್ ಹಾಗೂ ದೇವಳದ ವಿವಿಧ ಸಮಿತಿಗಳ ಸದಸ್ಯರಾದ ಕುಮಾರಸ್ವಾಮಿ ರೆಂಜಾಳ, ಜಗನ್ಮೋಹನ ರೈ, ರಾಮಕೃಷ್ಣ ರಾವ್ ರೆಂಜಾಳ, ಚಿನ್ನಪ್ಪ ಗೌಡ ಬೇರಿಕೆ, ಲಕ್ಷ್ಮಿ ನಾರಾಯಣ ರಾವ್ ರೆಂಜಾಳ, ದಿನೇಶ್ ಕೊರತ್ತೋಡಿ, ಶಶಿಕಾಂತ ಗುಳಿಗಮೂಲೆ, ಕೇಶವ ಗೌಡ ಜೋಗಿಮೂಲೆ, ಅಣ್ಣು ಕಟ್ಟಕೋಡಿ, ಪ್ರವೀಣ ಬಾಣೂರು, ಬಾಲಕೃಷ್ಣ ಜೋಗಿಮೂಲೆ ಮೊದಲಾದವರು ಉಪಸ್ಥಿತರಿದ್ದರು.