ಸುಳ್ಯ : ವಿಕಲ ಚೇತನರ ಮತ್ತು ಕಾರ್ಯ ಕರ್ತರ ಕುಂದು ಕೊರತೆ ಸಭೆ

0

ಸುಳ್ಯ ವಿಕಲ ಚೇತನರ ಮತ್ತು ಕಾರ್ಯ ಕರ್ತರ ಕುಂದು ಕೊರತೆ ಸಭೆಯು ಜ.24 ರಂದು ಸುಳ್ಯ ತಹಶೀಲ್ದಾರ್ ಅನಿತಾ ಲಕ್ಷ್ಮಿ ಅವರ ಅಧ್ಯಕ್ಷತೆಯಲ್ಲಿ ನಗರದ ಸಿಸಿಡಿಪಿಒ ಕಚೇರಿ ಕೆಳಗಡೆ ಇರುವ ಸ್ತ್ರೀ ಶಕ್ತಿ ಭವನ ದಲ್ಲಿ ನಡೆಯಿತು.

ಸಿಡಿಪಿಒ ರಶ್ಮಿ ಅಶೋಕ್, ತಾಲ್ಲೂಕು ವೈದ್ಯಾಧಿಕಾರಿ ನಂದ ಕುಮಾರ್, ಜಿಲ್ಲಾ ಕೋರ್ಡಿನೆಟರ್ ಸುಪ್ರಿತಾ, ಡಾಕ್ಟರ್ ಕರುಣಾಕರ್, ತಾಲೂಕು ಪಂಚಾಯತ್ ಮ್ಯಾನೇಜೆರ್ ಹರೀಶ್, ನೋಡೆಲ್ ಅಧಿಕಾರಿ ಶೈಲಜಾ, ಎಂಆರ್ ಡಬ್ಲ್ಯೂ ಚಂದ್ರ ಶೇಖರ್, ನಗರ ಯು ರ್ ಡಬ್ಲ್ಯೂ ಪ್ರವೀಣ್ ನಾಯಕ್, ಸಮಾಜ ಕಲ್ಯಾಣ ಇಲಾಖೆ, ಕೃಷಿ ಇಲಾಖೆ, ಕೆ ಎಸ್ ಆರ್ ಟಿ ಸಿ, ಉದ್ಯೋಗ ಖಾತ್ರಿ ಅಧಿಕಾರಿಗಳು ಉಪಸ್ಥಿತರಿದ್ದು, ವಿ ರ್ ಡಬ್ಲ್ಯೂ ಕಾರ್ಯ ಕರ್ತರು, ವಿಕಲ ಚೇತನರು ಭಾಗವಹಿಸಿ ಸಮಸ್ಯೆ ಗಳ ಬಗ್ಗೆ ಚರ್ಚೆ ನಡೆಸಿದರು.