ಚೊಕ್ಕಾಡಿ ಸತ್ಯ ಸಾಯಿ ಕ್ಷೇತ್ರದಲ್ಲಿ ಶಿವಲಿಂಗ ಮತ್ತು ಶ್ರೀ ಸ್ವಾಮಿಯ ಪಾದುಕಾ ಪ್ರತಿಷ್ಠಾಪನೆ ಹಾಗೂ ಸಾಯಿ ಸೌರಭ‌ ಭೋಜನಾಲಯದ ಲೋಕಾರ್ಪಣೆ

0

ಅಮರಪಡ್ನೂರು ಗ್ರಾಮದ ಚೊಕ್ಕಾಡಿ ಭಗವಾನ್ ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಯ ವತಿಯಿಂದ ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ರವರು ಸೃಷ್ಟಿಸಿ ಕರುಣಿಸಿದ ಶ್ರೀ ಶಿವಲಿಂಗ ಮತ್ತು ಶ್ರೀ ಸ್ವಾಮಿಯ ಪಾದುಕಾ ಪ್ರತಿಷ್ಠಾಪನೆ ಮತ್ತು ನೂತನ ಭೋಜನಾಲಯ ಶ್ರೀ ಸಾಯಿ ಸೌರಭ ದ ಲೋಕಾರ್ಪಣೆಯು ಜ.26 ರಂದು ಜರುಗಿತು.


ಬೆಳಗ್ಗೆ ಅರ್ಚಕರ ನೇತೃತ್ವದಲ್ಲಿ ಗಣಪತಿ ಹವನವಾಯಿತು. ಗಣರಾಜ್ಯೋತ್ಸವದ ಅಂಗವಾಗಿ ಶಾಲಾ ವಿದ್ಯಾರ್ಥಿಗಳ ಆಕರ್ಷಕ ಪಥ ಸಂಚಲನದೊಂದಿಗೆ ಸಾಗಿ ಬಂದು ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಬಳಿಕ ಸಾಯಿ ಸೌರಭ ಭೋಜನಾಲಯದ ಉದ್ಘಾಟನೆಯನ್ನು ಶ್ರೀ ಸತ್ಯ ಸಾಯಿ ಸೆಂಟ್ರಲ್ ಟ್ರಸ್ಟಿ ಆರ್.ಜೆ.ರತ್ನಾಕರ್ ರವರು ನೆರವೇರಿಸಿದರು. ಬಳಿಕ ಪುರೋಹಿತ್ ರವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮ ನಡೆದು ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ರವರು ಸೃಷ್ಟಿಸಿ ಕರುಣಿಸಿದ ಶ್ರೀ ಶಿವಲಿಂಗ ದ ಪ್ರತಿಷ್ಠಾಪನೆ ಮತ್ತು ಶ್ರೀ ಸ್ವಾಮಿಯ ಪಾದುಕಾ ಪ್ರತಿಷ್ಠಾಪನೆಯನ್ನು ನೆರವೇರಿಸಿದರು. ಆರ್ ಜೆ ರತ್ನಾಕರ ರವರು ಮಂಗಳಾರತಿ ಬೆಳಗಿ ಪುಷ್ಪಾರ್ಚನೆ ಸಮರ್ಪಿಸಿದರು.


ನೂತನ ಭೋಜನಾಲಯದಲ್ಲಿ ಸಂಪ್ರದಾಯದ ಪ್ರಕಾರ ಮುತ್ತೈದೆ ಮಹಿಳೆಯರು ಹಾಲು ಉಕ್ಕಿಸುವ ಕಾರ್ಯ ನೆರವೇರಿಸಿದರು.
ಈ ಸಂದರ್ಭದಲ್ಲಿ ಚೊಕ್ಕಾಡಿ ಸತ್ಯ ಸಾಯಿ ಸೇವಾ ಟ್ರಸ್ಟ್ ಅಧ್ಯಕ್ಷ ಲಕ್ಷ್ಮೀ ನಾರಾಯಣ ಕೋಟೆ ಹಾಗೂ ಸದಸ್ಯರು, ಸೇವಾ ಸಮಿತಿ ಸಂಚಾಲಕರು ಮತ್ತು ಸದಸ್ಯರು, ವಿದ್ಯಾ ಕೇಂದ್ರ ದ ಮುಖ್ಯ ಶಿಕ್ಷಕರು,ಅಧ್ಯಾಪಕ ವೃಂದದವರು,ನಿಲಯ ಪಾಲಕರು, ಪೋಷಕರು, ವಿದ್ಯಾರ್ಥಿಗಳು ಹಾಗೂ ಊರಿನ ಸಮಸ್ತ ಸಾಯಿ ಭಕ್ತಾದಿಗಳು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿದರು.
ವಿದ್ಯಾ ಕೇಂದ್ರದ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನದೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು.