ಜ.30: ಮಹಾತ್ಮ ಗಾಂಧಿಜೀಯವರ ಪುಣ್ಯತಿಥಿ ಪ್ರಯುಕ್ತ ನಗರದಲ್ಲಿ‌ ಸ್ವಚ್ಚತಾ ಕಾರ್ಯ

0

ಸ್ವಯಂ ಪ್ರೇರಿತವಾಗಿ ಪಾಲ್ಗೊಳ್ಳುವಂತೆ ನಗರ ಪಂಚಾಯತ್ ವಿನಂತಿ

ಜ.30ರಂದು ಮಹಾತ್ಮ ಗಾಂಧೀಜಿಯವರ ಪುಣ್ಯ ತಿಥಿ ದಿನವಾಗಿದ್ದು ಆ ದಿನ ಸುಳ್ಯ ನಗರ ವ್ಯಾಪ್ತಿಯಲ್ಲಿ ಸಂಜೆ 4ಗಂಟೆಯಿಂದ 4.30 ರವರೆಗೆ ಸ್ವಚ್ಚತಾ ಕಾರ್ಯ ನಡೆಸಲು ನ.ಪಂ. ವತಿಯಿಂದ ಯೋಜನೆ ರೂಪಿಸಲಾಗಿದೆ.

ಕಳೆದ 20 ವಾರಗಳಿಂದ ನಿರಂತರವಾಗಿ ಪ್ರತೀ ಗುರುವಾರ ಬೆಳಗ್ಗೆ 7 ರಿಂದ 8 ಗಂಟೆ ತನಕ ನ.ಪಂ. ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ರ ನೇತೃತ್ವದಲ್ಲಿ ಅಮರ ಸುಳ್ಯ ರಮಣೀಯ ಸುಳ್ಯ ಎಂಬ ಹೆಸರಿನಲ್ಲಿ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸ್ವಚ್ಚತಾ ಕಾರ್ಯ ನಡೆಯುತ್ತಿದೆ.

ಜ. 30 ರಂದು ಮಹಾತ್ಮ ಗಾಂಧೀಜಿಯವರ ಪುಣ್ಯ ತಿಥಿಯಂದು ಗಾಂಧೀಜಿಯವರ ಸ್ವಚ್ಚಭಾರತದ ಕನಸಿನ ಯೋಜನೆಯಂತೆ ನಗರದ ಎಲ್ಲ ಸರಕಾರಿ ಕಚೇರಿಗಳ ಸಿಬ್ಬಂದಿಗಳು, ಶಾಲಾ ಕಾಲೇಜು ಅಧ್ಯಾಪಕ ವೃಂದ ಮತ್ತು ಸಿಬ್ಬಂದಿಗಳು ಎಲ್ಲ ಸಂಘ ಸಂಸ್ಥೆಗಳ ಸದಸ್ಯರು, ವ್ಯಾಪಾರಿಗಳು ತಮ್ಮ ವಠಾರ ವನ್ನು ಸಂಜೆ 4 ರಿಂದ 4.30 ರ ತನಕ ಸ್ವಚ್ಚ ಗೊಳಿಸಬೇಕು. ಈ ಕಾರ್ಯದಲ್ಲಿ ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ಭಾಗವಹಿಸಬೇಕು ಎಂದು ನ.ಪಂ. ಅಧ್ಯಕ್ಷ ರು‌ಹಾಗೂ ಮುಖ್ಯಾಧಿಕಾರಿ ಗಳು ವಿನಂತಿಸಿದ್ದಾರೆ.