ಮುರುಳ್ಯ: ಗ್ರಾಮ ಪಂಚಾಯತ್ ನಲ್ಲಿ ಗಣರಾಜ್ಯೋತ್ಸವ ಆಚರಣೆ

0


ಮುರುಳ್ಯ ಗ್ರಾಮ ಪಂಚಾಯತ್ ನಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಪಂಚಾಯತ್ ಅಧ್ಯಕ್ಷ ಕು. ಜಾನಕಿ ಧ್ವಜಾರೋಹಣಗೈದರು. ಬಳಿಕ ಹೆಣ್ಣು ಮಕ್ಕಳ ಸಂರಕ್ಷಣೆ ಬಗ್ಗೆ ಪ್ರತಿಜ್ಞೆ ಕಾರ್ಯಕ್ರಮ ನಡೆಯಿತು.
ಸುದ್ದಿಯ ಆಶಯದ ಲಂಚ ಭ್ರಷ್ಟಾಚಾರದ ವಿರುದ್ಧ ಭಾಗಿರಥಿ ಮುರುಳ್ಯರವರು ಪ್ರತಿಜ್ಞಾ ಕಾರ್ಯಕ್ರಮ ನಡೆಸಿದರು.
ಶಾಂತಿನಗರ ಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಈ ಸಂದರ್ಭದಲ್ಲಿ ಪಂಚಾಯಿತಿ ಉಪಾಧ್ಯಕ್ಷೆ ವನಿತಾ ಬಾಮುಲೆ, ಸದಸ್ಯರಾದ ಕರುಣಾಕರ ಗೌಡ, ಸುಂದರ ಗೌಡ ಶೇರ, ಪುಷ್ಪಲತಾ ಕುಕ್ಕಟ್ಟೆ, ಶೀಲಾವತಿ ಗೋಳ್ತಿಲ, ಮೋನಪ್ಪ ಗೌಡ ಅಲೇಕಿ, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಕಾರ್ಯದರ್ಶಿ ಸೀತಾರಾಮ ಎಸ್. ಸ್ವಾಗತಿಸಿ, ಪಿಡಿಓ ಚಂದ್ರಾವತಿ ರೈ ವಂದಿಸಿದರು. ಪ್ರದೀಪ್ ಕಾರ್ಯಕ್ರಮ ನಿರೂಪಿಸಿದರು.