ಚೆಂಬು : ತಡೆಗೋಡೆ ನಿರ್ಮಾಣಕ್ಕೆ ಭೂಮಿಪೂಜೆ

0

ಚೆಂಬು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೂಡಡ್ಕ ಸೇತುವೆ ಬಳಿ ಶಾಸಕ ಕೆ.ಜಿ.ಬೋಪಯ್ಯರವರ ಅನುದಾನದಲ್ಲಿ ರೂ.50 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ತಡೆಗೋಡೆಗೆ ಭೂಮಿಪೂಜೆ ಜ..28ರಂದು ಮಾದ್ಯಮ ಪ್ರಮುಖ್ ಮತ್ತು ಶಕ್ತಿ ಕೇಂದ್ರದ ಅಧ್ಯಕ್ಷ ಸುಬ್ರಹ್ಮಣ್ಯ ಉಪಾಧ್ಯಾಯರ ನೇತೃತ್ವದಲ್ಲಿ ನಡೆಸಲಾಯಿತು. ಬಂಡೆಡ್ಕ ಭಾಸ್ಕರನವರು ತೆಂಗಿನಕಾಯಿ ಒಡೆಯುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಪಯಸ್ವಿನಿ ಸೊಸೈಟಿ ಅಧ್ಯಕ್ಷ ಅನಂತ್ ಯನ್.ಸಿ.,ಗ್ರಾಪಂ ಸದಸ್ಯರಾದ ತೀರ್ಥರಾಮ ಪೂಜಾರಿಗದ್ದೆ ,ರಮೇಶ್ ಹುಲ್ಲುಬೆಂಕಿ ,ವಸಂತ ಊರುಬೈಲು ,ಪ್ರಮುಖರಾದ ರಾಮಮೂರ್ತಿ ಉಂಬಳೆ , ಶ್ರೀನಿವಾಸ ನಿಡಿಂಜಿ ,ಚಂಡಡ್ಕ ಗಿರೀಶ್, ಭರತ ,ದೇವಿಪ್ರಸಾದ್.ಪಿ.ಟಿ ,ನಾಗೇಶ್ ಪನೆಡ್ಕ ,ಪುರುಷೋತ್ತಮ. ಎ.ಎಸ್,ಪೊಳ್ಮಾರ್ ನಾಗೇಶ್ ,ತೀರ್ಥಪ್ರಸಾದ್ ,ನಾಯರ್ ಗದ್ದೆ ಪುಟ್ಟಣ್ಣ ,ಮದನ್ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.