ಕುರುಂಜಿಭಾಗ್: ಶ್ರೀ ಸತ್ಯಸಾಯಿ ಸೇವಾಧಾಮ ಲೋಕಾರ್ಪಣೆ

0

ಭಗವಾನ್ ಶ್ರೀ ಸತ್ಯಸಾಯಿ ಸೇವಾಸನ್ನಿಧಿ ಚೊಕ್ಕಾಡಿ ಇದರ ಅಂಗವಾದ ಶ್ರೀ ಸತ್ಯಸಾಯಿ ಸೇವಾಧಾಮದ ನೂತನ ಶ್ರೀ ಸತ್ಯಸಾಯಿ ಮಂದಿರ ಸುಳ್ಯದ ಕುರುಂಜಿಭಾಗ್‌ನ ಅಂಬಟೆಡ್ಕದಲ್ಲಿ ಜ.೨೬ರಂದು ಲೋಕಾರ್ಪಣೆಗೊಂಡಿತು. ಪುಟಪರ್ತಿಯ ಶ್ರೀ ಸತ್ಯಸಾಯಿ ಸೆಂಟ್ರಲ್ ಟ್ರಸ್ಟ್ ಪ್ರಶಾಂತಿ ನಿಲಯಂ ಇದರ ಮೇನೆಜಿಂಗ್ ಟ್ರಸ್ಟಿ ಆರ್.ಜೆ.ರತ್ನಾಕರ್ ರವರು ಆಗಮಿಸಿ ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಉತ್ತರ ವಿಭಾಗದ ರಾಜ್ಯಾಧ್ಯಕ್ಷರಾದ ಪದ್ಮನಾಭ.ಪೈ ಯವರಿಗೆ ಆರ್.ಜೆ.ರತ್ನಾಕರ್‌ರವರು ನೂತನ ಮಂದಿರದ ಕೀ ಹಸ್ತಾಂತರಿಸಿ ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ತತ್ವ ಆದರ್ಶಗಳನ್ನು ಸಮಾಜದಲ್ಲಿ ಮೈಗೂಡಿಸಲು ಈ ಮಂದಿರವು ಸಹಕಾರಿಯಾಗಲಿ ಎಂದು ಶುಭಹಾರೈಸಿದರು. ಜಿಲ್ಲಾಧ್ಯಕ್ಷ ಪ್ರಸನ್ನ ಎನ್.ಭಟ್, ಚೊಕ್ಕಾಡಿ ಸಮಿತಿಯ ಸಂಚಾಲಕರಾದ ತೇಜಪ್ರಕಾಶ್ ಬುಡ್ಲೆಗುತ್ತು ಹಾಗೂ ಸಾಯಿ ಭಕ್ತರು ಉಪಸ್ಥಿತರಿದ್ದರು.