ಅಮರಮುಡ್ನೂರು :ವೀಲ್ ಚೇರ್ ವಿತರಣೆ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡ ತೋಟ ವಲಯದ ಅಮರ ಮುಡ್ನೂರು ಗ್ರಾಮದ ಮೋನಪ್ಪ ಗೌಡ ಬರ ಮೇಲು ಇವರು ಇತ್ತೀಚೆಗೆ ಪಾಶ್ವವಾಯು ಪೀಡಿತರಾಗಿ ಮಲಗಿದ್ದಲ್ಲಿ ಇದ್ದು, ಇವರಿಗೆ ಕ್ಷೇತ್ರದಿಂದ ಜನ ಮಂಗಲ ಕಾರ್ಯಕ್ರಮದ ಅಡಿಯಲ್ಲಿ ಮಂಜೂರಾದ ವೀಲ್ ಚೇರನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಹರಿಶ್ಚಂದ್ರ ಕಟ್ಟದ ಮಜಲು ಪ್ರಗತಿ ಬಂದು ಸ್ವ ಸಹಾಯ ಸಂಘದ ಸದಸ್ಯರುಗಳಾದ ಚಂದ್ರಶೇಖರ್ ಅಜ್ಜನಗದ್ದೆ, ಚೆನ್ನಕೇಶವ ಪ್ರಶಾಂತ್, ವಲಯ ಮೇಲ್ವಿಚಾರಕರಾದ ಸೀತಾರಾಮ್, ಸೇವಾ ಪ್ರತಿನಿಧಿಗಳಾದ ಶ್ರೀಮತಿ ಶ್ರೀಲತಾ ಚಂದ್ರಪ್ರಕಾಶ್ ಹಾಗೂ ಮನೆಯವರಾದ ಮಾಧವ ಹಾಗೂ ಇತರರು ಉಪಸ್ಥಿತರಿದ್ದರು.