ಕೊಡಿಯಾಲ : ಕಲ್ಲಗದ್ದೆ ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ‌ಯ 48ನೇ ವಾರ್ಷಿಕೋತ್ಸವ

0


ನಗರ ಭಜನೆಗೆ ಚಾಲನೆ

ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಕಲ್ಲಗದ್ದೆ, ಕೊಡಿಯಾಲ ಇದರ 48ನೇ ವಾರ್ಷಿಕೋತ್ಸವದ ಅಂಗವಾಗಿ ನಗರ ಭಜನಾ ಕಾರ್ಯಕ್ರಮ ಜ. 26ರಂದು ಕೊಡಿಯಾಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಕಲ್ಲಗದ್ದೆಯಲ್ಲಿ ಆರಂಭಗೊಂಡಿತು. ಕಲಾ ಗ್ರಾಮ ಕಲ್ಮಡ್ಕ ಇದರ ಸ್ಥಾಪಕರಾದ ಸಾಯಿನಾರಾಯಣ ಕಲ್ಮಡ್ಕ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಿವೃತ್ತ ಅಧ್ಯಾಪಕ ಜನಾರ್ಧನ ಗೌಡ ಚಾರ್ವಕ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಜಯಂತ್ ವೈ ಚಾರ್ವಕ ಅಭ್ಯಾಗತರಾಗಿ ಭಾಗವಹಿಸಿದ್ದರು. ಶ್ರೀ ದುರ್ಗಾಂಬಿಕಾ ಭಜನಾ‌ ಮಂಡಳಿ ಕೋಣಾಜೆ ಕಡ್ಯ ಇದರ ಅಧ್ಯಕ್ಷ ವಾಸುದೇವ ಭಟ್ ಕಡ್ಯ ನಗರ ಭಜನೆಗೆ ಚಾಲನೆ ನೀಡಿದರು. ನ್ಯಾಯಾಲಯ ನಿವೃತ್ತ ನೌಕರ ತಿಮ್ಮಪ್ಪ ಗೌಡ ಆರ್ವಾರ, ಸರ್ವೋದಯ ಕಾರ್ಯಕರ್ತ ಐತ್ತಪ್ಪ ರೈ ಗೌರವ ಉಪಸ್ಥಿತರಾಗಿದ್ದರು. ಭಜನಾ ಮಂಡಳಿ ಅಧ್ಯಕ್ಷ ಬಾಚೋಡಿ ವೆಂಕಟೇಶ ಪೈ ಕಲಡಿಯಾಲ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಗರ ಭಜನೆಯಲ್ಲಿ ಕೊಡಿಯಾಲ ಗ್ರಾಮದ ಪ್ರತೀ ಮನೆಗಳಿಗೆ ತೆರಳಿ ಭಜನಾ ಮಂಡಳಿ ಸದಸ್ಯರು ಭಜನಾ ಕಾರ್ಯಕ್ರಮ ನೆರವೇರಿಸಲಿದ್ದಾರೆ. ಮಾ. 4ರಂದು ಭಜನಾ ಕಾರ್ಯಕ್ರಮ ಮುಕ್ತಾಯಗೊಳ್ಳಲಿದ್ದು, ಅಂದು ಸಂಜೆ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮ, ಸನ್ಮಾನ ಕಾರ್ಯಕ್ರಮ ನಡೆಯಲಿದೆ.