ನಾರಾಯಣ ಅರ್ಭಡ್ಕ ನಿಧನ

0


ಜಾಲ್ಸೂರು ಗ್ರಾಮದ ಅರ್ಭಡ್ಕ ದಿ. ಕುಂಞಿಕಣ್ಣ ಮಣಿಯಾಣಿ ಅವರ ಪುತ್ರ ನಾರಾಯಣ ಅವರು ಅಸೌಖ್ಯದಿಂದಾಗಿ ಫೆ.2ರಂದು ನಿಧನರಾದರು. ಅವರಿಗೆ 39 ವರ್ಷ ವಯಸ್ಸಾಗಿತ್ತು.
ನಾರಾಯಣ ಅವರಿಗೆ ಮೂರ್ಛೆ ಹೋಗುವ ಕಾಯಿಲೆಯಿದ್ದು, ಫೆ.2ರಂದು ಅವರು ಸುಳ್ಯ ಬಸ್ಸು ತಂಗುದಾಣದ ಬಳಿ ಮೂರ್ಛೆ ಹೋಗಿ ಬಿದ್ದಿದ್ದರೆನ್ನಲಾಗಿದೆ. ತಕ್ಷಣ ಸ್ಥಳೀಯರ ನೆರವಿನಿಂದ ಮನೆಯವರು ಆಸ್ಪತ್ರೆಗೆ ದಾಖಲಿಸಿದರಾದರೂ, ಆ ವೇಳೆಗೆ ಅವರು ಕೊನೆಯುಸಿರೆಳೆದಿದ್ದರೆಂದು ತಿಳಿದುಬಂದಿದೆ.
ಅವಿವಾಹಿತರಾಗಿದ್ದ ನಾರಾಯಣ ಅವರು ತಾಯಿ ಶ್ರೀಮತಿ ಲಕ್ಷ್ಮೀ ಅರ್ಭಡ್ಕ, ಸಹೋದರ ವಾಸುದೇವ ಅರ್ಭಡ್ಕ, ಸಹೋದರಿಯರಾದ ಚಂದ್ರಾವತಿ, ಶಾರದಾ, ವಿಮಲ, ಮಾಧವಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.