ಅಡ್ಕಾರು: ಅಂಬಾಡಿಮೂಲೆ ಶ್ರೀ ವಿಷ್ಣುಮೂರ್ತಿ ಮತ್ತು ಗುಳಿಗ ದೈವಸ್ಥಾನದ ಜೀರ್ಣೋದ್ಧಾರ ಹಿನ್ನೆಲೆ

0

ಗುಳಿಗ ದೈವದ ಕಟ್ಟೆ ನಿರ್ಮಾಣಕ್ಕೆ ಕುಟ್ಟಿ ಮುಹೂರ್ತ

ಜಾಲ್ಸೂರು ಗ್ರಾಮದ ಅಡ್ಕಾರಿನ ಅಂಬಾಡಿಮೂಲೆ ಪರಿಸರದಲ್ಲಿರುವ ಶ್ರೀ ವಿಷ್ಣುಮೂರ್ತಿ ಮತ್ತು ಗುಳಿಗ ದೈವಸ್ಥಾನವು ಜೀರ್ಣೋದ್ಧಾರಗೊಳ್ಳುತ್ತಿದ್ದು,
ಶ್ರೀ ಗುಳಿಗ ದೈವದ ಕಟ್ಟೆಯ ನಿರ್ಮಾಣಕ್ಕೆ ಫೆ.5ರಂದು ಬೆಳಿಗ್ಗೆ ಕುಟ್ಟಿ ಮುಹೂರ್ತ ಜರುಗಿತು.
ಶಿಲ್ಪಿ ಮಾಧವನ್ ಎನ್.ಕೆ. ಹರ್ಲಡ್ಕ, ಹಾಗೂ ಉಮೇಶ್ ಹರ್ಲಡ್ಕ ಅವರು ಕುಟ್ಟಿ ಮುಹೂರ್ತ ನಡೆಸಿದರು.


ಈ ಸಂದರ್ಭದಲ್ಲಿ
ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಗಣೇಶ್ ಅಂಬಾಡಿಮೂಲೆ, ಗೌರವ ಸಲಹೆಗಾರ ಜಗನ್ನಾಥ ಬೇರ್ಪಡ್ಕ, ಅಧ್ಯಕ್ಷ ಅಶೋಕ ಅಡ್ಕಾರು, ಕಾರ್ಯದರ್ಶಿ ನವೀನ ಅಂಬಾಡಿಮೂಲೆ, ಖಜಾಂಜಿ ಗಂಗಾಧರ ಅಡ್ಕಾರು, ಸದಸ್ಯರಾದ ಎ.ಆರ್. ಗೋಪಾಲ ಅಡ್ಕಾರು, ಎ.ಆರ್. ಬಾಬು ಅಡ್ಕಾರು, ಎ.ಆರ್. ಗಂಗಾಧರ ಅಡ್ಕಾರು, ಶಾರದಾ ಸುಳ್ಯ, ಸ್ವಸ್ತಿಕ್ ಸುಳ್ಯ, ಸುನೀಶ್ ಪಾಂಡಿ, ಹೇಮನಾಥ ಪೆರಾಜೆ, ಚಂದ್ರಿಕಾ ಅಂಬಾಡಿಮೂಲೆ ಉಪಸ್ಥಿತರಿದ್ದರು.