ಸವಣೂರು ಹಿಂದೂ ರುದ್ರ ಭೂಮಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ

0

ಭಾವೈಕ್ಯ ಯುವಕ ಮಂಡಲ ಪೆರುವಾಜೆ ಇದರ ವತಿಯಿಂದ ಹಿಂದೂ ರುದ್ರಭೂಮಿ ಕನಡಕುಮೇರು, ಸವಣೂರು ಇಲ್ಲಿ ಸ್ವಚ್ಛತಾ ಕಾರ್ಯಕ್ರಮವು ನಡೆಯಿತು. ಯುವಕ ಮಂಡಲದ ಅಧ್ಯಕ್ಷರಾದ ಪುರುಷೋತ್ತಮ ಮಠತ್ತಡ್ಕ ಇವರ ನೇತೃತ್ವದಲ್ಲಿ ನಡೆದ ಈ ಒಂದು ಸ್ವಚ್ಛತಾ ಕಾರ್ಯದಲ್ಲಿ ಯುವಕ ಮಂಡಲದ ಗೌರವಾಧ್ಯಕ್ಷರಾದ ಜಯಪ್ರಕಾಶ್ ರೈ ಪೆರುವಾಜೆ, ಕಾರ್ಯದರ್ಶಿ ರಜನೀಶ್ ಸಾರಕರೆ, ಸದಸ್ಯರಾದ ವಾಸುದೇವ ಪೆರುವಾಜೆ, ಜಯಚಂದ್ರ ಪೆರುವಾಜೆ, ವಿಜಯ ಪೆರುವಾಜೆ, ಧರ್ಮಪಾಲ ಪೆರುವಾಜೆ, ರಜನೀಶ್ ಪಿ., ಶಿವಪ್ರಸಾದ್ ಪೆರುವಾಜೆ, ಸುಜಿತ್ ಆಚಾರ್ಯ ಪೆರುವಾಜೆ ಮತ್ತು ಹರ್ಷಿತ್ ಕುಮಾರ್ ಪೆರುವಾಜೆ ಭಾಗಿಯಾದರು.

ಸ್ಥಳೀಯರಾದ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಸತೀಶ್ ಬಲ್ಯಾಯ ಮತ್ತು ಜಯರಾಮ ರೈ ಸಹಕರಿಸಿದರು.