ಹಲವಾರು ವರ್ಷ ಪ್ರಜಾವಾಣಿ ವರದಿಗಾರರಾಗಿದ್ದ ಸುಳ್ಯ ತಾಲೂಕು ಪಂಬೆತ್ತಾಡಿ ಗ್ರಾಮದವರಾದ ಸುರೇಶ್ ಬೆಳಗಜೆಯವರಿಗೆ ಅವರು ಮಾದ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಕರ್ನಾಟಕ ಮಾಧ್ಯಮ ಅಕಾಡೆಮಿಯು 2022 ನೇ ಸಾಲಿನ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ. ಸುರೇಶ್ ಬೆಳಗಜೆಯವರು ಸುದ್ದಿ, ಹೊಸದಿಗಂತ, ಉದಯವಾಣಿಗಳ ಬಳಿಕ ಪ್ರಜಾವಾಣಿಯಲ್ಲಿ ಹಲವು ವರ್ಷ ಕೆಲವು ಜಿಲ್ಲೆಗಳಲ್ಲಿ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ಇದೀಗ ಒಂದು ವರ್ಷದಿಂದ ಅವರು ವೃತ್ತಿ ತೊರೆದು ಬಂದು ಪಂಬೆತ್ತಾಡಿಯಲ್ಲಿ ನೆಲೆಸಿ ಕೃಷಿಕರಾಗಿದ್ದಾರೆ.