ಡಾ. ಚಂದ್ರಶೇಖರ ದಾಮ್ಲೆಯವರ ಕೃತಿಗೆ ದತ್ತಿನಿಧಿ ಪ್ರಶಸ್ತಿ

0

ಕನ್ನಡ ಸಾಹಿತ್ಯ ಪರಿಷತ್ತು ತನ್ನ 2021 ನೇ ಸಾಲಿನ ದತ್ತಿ ನಿಧಿ ಪ್ರಶಸ್ತಿಗಳನ್ನು ಪ್ರಕಟಿಸಿದ್ದು ಮನೋವಿಜ್ಞಾನ ವಿಭಾಗದ ಪ್ರಶಸ್ತಿಯು ಡಾ. ಚಂದ್ರಶೇಖರ ದಾಮ್ಲೆಯವರ “ನನ್ನ ಮಗಳು ತುಂಟಿ ಅಲ್ಲ” ಎಂಬ ಕೃತಿಗೆ ದೊರಕಿದೆ. ಡಾ. ಎ.ಎಸ್. ಧರಣೇಂದ್ರಯ್ಯರ ಹೆಸರಿನಲ್ಲಿರುವ ಈ ಪ್ರಶಸ್ತಿಯು ರೂಪಾಯಿ 5,೦೦೦/- ಮೊತ್ತವನ್ನು ಹೊಂದಿದ್ದು ಈ ಕೃತಿಯನ್ನು ನವಕರ್ನಾಟಕ ಪ್ರಕಾಶನದವರು ಪ್ರಕಟಿಸಿದ್ದಾರೆ. ತನ್ನ ಕೃತಿಯನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಿದ ಪರಿಷತ್ತಿಗೆ ಡಾ. ದಾಮ್ಲೆಯವರು ಕೃತಜ್ಞತೆ ಸಲ್ಲಿಸಿದ್ದಾರೆ.