ಅಜ್ಮೀರ್ ಯಾತ್ರೆಯಲ್ಲಿದ್ದ ಕರಿಂಬಿಲದ ಯುವಕ ಸಿದ್ದೀಕ್ ಅಬ್ದುಲ್ಲಾ ಪೂನಾದಲ್ಲಿ ಮೃತ್ಯು

0

ಸುಳ್ಯ ಕರಿಂಬಿಲ ಇಬ್ರಾಹಿಂ ಸಖಾಫಿ ಯವರ ಪುತ್ರ ಸಿದ್ದೀಕ್ ಅಬ್ದುಲ್ಲಾ (22ವರ್ಷ) ಪೂನಾದಲ್ಲಿ ನಿಧನರಾದರು.
ಕರಿಂಬಿಲ ನಿವಾಸಿ ಕೇರಳ ಕುಟ್ಯಾಡಿ ಸಿರಾಜುಲ್ ಹುದಾ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದರು.
ಸಿರಾಜುಲ್ ಹುದಾದ ವಿದ್ಯಾರ್ಥಿಗಳೊಂದಿಗೆ ರೈಲಿನಲ್ಲಿ ಅಜ್ಮೀರ್ ಯಾತ್ರೆ ಕೈಗೊಂಡಿದ್ದರು ಪೂನಾ ತಲುಪುವಾಗ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿತು ಅವರನ್ನು ಅಲ್ಲಿಯ ಅಸ್ಪತ್ರೆಗೆ ದಾಖಲು ಮಾಡಲಾಯಿತು.
ಚಿಕಿತ್ಸೆ ಫಲ ಕಾಣದೆ ಪೂನಾದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.