ಕರುಣಾಕರ ಪರವರಿಗೆ ಗಡಿನಾಡ ಧ್ವನಿ ಜಾನಪದ ಸಿರಿ ರಾಜ್ಯ ಪ್ರಶಸ್ತಿ

0


ಗಡಿನಾಡ ಧ್ವನಿ ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ನೀಡುವ ಜನಪದ ಸಿರಿ ರಾಜ್ಯ ಪ್ರಶಸ್ತಿಗೆ ಪ್ರಸಿದ್ಧ ದೈವನರ್ತಕ ಕರುಣಾಕರ ಪರವ ಭಾಜನರಾಗಿದ್ದಾರೆ.

ಅನೇಕ ವರ್ಷಗಳಿಂದ ದೈವ ನರ್ತನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕರುಣಾಕರ ಪರವ ಅವರು ಶಿಕ್ಷಕರೂ ಆಗಿದ್ದಾರೆ. ಅವರ ಈ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ಘೋಷಿಸಲಾಗಿದ್ದು, ಫೆ. ೨೫ ರಂದು ನಡೆಯಲಿರುವ ಕರ್ನಾಟಕ ಗಡಿನಾಡ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.