ಸುಳ್ಯ ಲ್ಯಾಂಪ್ ಸೊಸೈಟಿ ನಿರ್ದೇಶಕ ಸುಬ್ಬಣ್ಣ ನಾಯ್ಕರಿಗೆ ಅಪಘಾತ ಆಸ್ಪತ್ರೆಗೆ ದಾಖಲು

0

ಸುಳ್ಯ ಲ್ಯಾಂಪ್ ಸೊಸೈಟಿ ನಿರ್ದೇಶಕ ಗುತ್ತಿಗಾರು ಗ್ರಾಮದ ಬಳ್ಳಕ್ಕ ಸುಬ್ಬಣ್ಣ ನಾಯ್ಕ ದಂಪತಿ ಅಪಘಾತಕ್ಕೀಡಾಗಿ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ಫೆ. 24ರಂದು ಸಂಜೆ ನಡೆದಿದೆ.
ಸುಬ್ಬಣ್ಣ ನಾಯ್ಕರು ತಮ್ಮ ಪತ್ನಿ ಹೇಮಾವತಿಯವರೊಂದಿಗೆ ಹೇಮಾವತಿಯವರ ತವರುಮನೆ ಮಾಣಿ ಬಳಿಯ ಹನುಮಜೆಗೆ ತೆರಳಿದ್ದರು. ಫೆ. 24ರಂದು ತಮ್ಮ ಮನೆಗೆ ಬರುತ್ತಿರುವಾಗ ಕಡಬ ಪಂಜ ರಸ್ತೆಯ ಕೊಡಿಂಬಾಳದಲ್ಲಿ ಅಪಘಾತವಾಗಿದೆ. ಸುಬ್ಬಣ್ಣ ನಾಯ್ಕರು ಪಂಜ ಕಡೆಗೆ ಬರುತ್ತಿದ್ದಾಗ ಪಂಜದಿಂದ ಕಡಬ ಕಡೆಗೆ ಬೆಳ್ಳಾರೆ ಕೆ.ಪಿ.ಎಸ್ ಮುಖ್ಯೋಪಾಧ್ಯಾಯರಾದ ಮಾಯಿಲಪ್ಪರು ಚಲಾಯಿಸುತ್ತದ್ದ ಆಲ್ಟೋ ಕಾರು ಮುಖಾಮುಖಿ ಡಿಕ್ಕಿಯಾಗಿದೆ.

ಈ ಸಂದರ್ಭದಲ್ಲಿ ಬೈಕ್ ಮತ್ತು ಬೈಕಿನಲ್ಲಿದ್ದ ದಂಪತಿ ಮಾರ್ಗದ ಬದಿಯ ಚರಂಡಿಗೆ ಬಿದ್ದರೆನ್ನಲಾಗಿದೆ. ಸುಬ್ಬಣ್ಣ ನಾಯ್ಕರ ಕಾಲಿನ ಪಾದಕ್ಕೆ ಬಲವಾದ ಪೆಟ್ಟು ಬಿದ್ದು ನರ ಕಟ್ ಆಗಿರುವುದಾಗಿಯೂ, ಅವರ ಪತ್ನಿ ಶ್ರೀಮತಿ ಹೇಮಾವತಿಯವರ ಮೊನಕಾಲು, ತೊಡೆ ಮತ್ತು ಕಾಲಿನ ಚಿಪ್ಪಿಗೆ ಗಂಭೀರ ಗಾಯವಾಗಿರುವುದಾಗಿ ತಿಳಿದುಬಂದಿದೆ. ಗಾಯದೊಳಗೆ ಕಲ್ಲು ಮಣ್ಣು ಸೇರಿದ್ದರಿಂದ ಮತ್ತು ನಡೆಯಲಾಗದ ಸ್ಥಿತಿಯಲ್ಲಿದ್ದ ಇವರನ್ನು ಸ್ಥಳೀಯರು ಅ್ಯಂಬುಲೆನ್ಸ್ ಮೂಲಕ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದುಬಂದಿದೆ. ಪ್ರಕರಣ ಕಡಬ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.