ಜೇಸಿಐ ಸುಳ್ಯ ಪಯಸ್ವಿನಿ : ಸಾಮಾನ್ಯ ಸಭೆ ಹಾಗೂ LDMT ತರಬೇತಿ ಕಾರ್ಯಕ್ರಮ

0

ಅಯ್ಯಪ್ಪ ಬಂಡಿಗೇರರಿಗೆ “ಮೌನ ಸಾಧಕ”ಪ್ರಶಸ್ತಿ ಪ್ರದಾನ

ಜೇಸಿಐ ಸುಳ್ಯ ಪಯಸ್ವಿನಿ (ರಿ.) ಸುಳ್ಯ ಇದರ ಸಾಮಾನ್ಯ ಸಭೆ ಹಾಗೂ LDMT ತರಬೇತಿ ಕಾರ್ಯಕ್ರಮ ಸುಳ್ಯ ದ ಕಾಣತ್ತಿಲ ದೇವಮ್ಮ ಕಾಂಪ್ಲೆಕ್ಸ್ ನಲ್ಲಿ ನಡೆಯಿತು. ಘಟಕಧ್ಯಕ್ಷ Jc ನವೀನಕುಮಾರ್ ಕೂಕುಲುಮಜಲು ಇವರ ಅದ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಲಯ15 ರ ಉಪಾಧ್ಯಕ್ಷ JFM ದೇವರಾಜ್ ಕುತ್ಪಾಜೆ ಯವರು ಘಟಕ ಸದಸ್ಯರುಗಳಿಗೆ LDMT ತರಬೇತಿ ಯನ್ನು ನಡೆಸಿಕೊಟ್ಟರು.

ಈ ಸಂಧರ್ಭದಲ್ಲಿ ಜೆಸಿಐ ಭಾರತ ದ ವಲಯ 15ರ ಸಲ್ಯೂಟ್ ದಿ ಸೈಲೆಂಟ್ ವರ್ಕರ್ ಕಾರ್ಯಕ್ರಮದಡಿಯಲ್ಲಿ ಮೆಸ್ಕಾಂ ಇಲಾಖೆ ಯ ಉದ್ಯೋಗಿ,ಅಜ್ಜಾವರ ಹಾಗೂ ಮಂಡೆಕೋಲು ಭಾಗದಲ್ಲಿ ಲೈನ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಅಯ್ಯಪ್ಪ ಬಂಡಿಗೇರ ರವರನ್ನು”ಮೌನ ಸಾಧಕ”ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಮಾರಂಭ ದಲ್ಲಿ ನಿಕಟಪೂರ್ವಧ್ಯಕ್ಷ Jc ರಂಜಿತ್ ಕುಕ್ಕೆಟಿ ಪೂರ್ವ ವಲಯಧ್ಯಕ್ಷ ಅಶೋಕ್ ಚೂoತಾರ್, ವಲಯಧಿಕಾರಿ ಗುರುರಾಜ್ ಅಜ್ಜಾವರ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು. ಕಾರ್ಯದರ್ಶಿ Jc ಸುರೇಶ್ ಕಾಮತ್ ವಂದಿಸಿದರು.