ಕರ್ನಾಟಕ ರಾಜ್ಯ ಎಸ್. ಡಿ. ಎಂ. ಸಿ. ಸಮನ್ವಯ ವೇದಿಕೆ ದ. ಕ. ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆ ದ. ಕ. ಇದರ ಸಹಯೋಗದಲ್ಲಿ ಎಸ್. ಡಿ. ಎಂ. ಸಿ. ಯ 21ನೇ ವರ್ಷಾಚರಣೆ ಯ ಪ್ರಯುಕ್ತ ಜಿಲ್ಲಾಮಟ್ಟದ ಕ್ರಿಯಾಶೀಲ ಶಾಲಾಭಿವೃದ್ಧಿ ಹಾಗೂ ಮೇಲುಸ್ತು ವಾರಿ ಸಮಿತಿಗಳಿಗೆ ಅಭಿನಂದನಾ ಕಾರ್ಯಕ್ರಮವು ಮಾಣಿ ನೇರಳಕಟ್ಟೆ ಜನಪ್ರಿಯ ಗಾರ್ಡನ್ ನಲ್ಲಿ ಫೆ.28ರಂದು ನಡೆಯಿತು. ಸುಳ್ಯ ತಾಲೂಕಿನಿಂದ ಪ್ರತಿನಿಧಿಸಿದ ಅಮರಪಡ್ನೂರು ಗ್ರಾಮದ ಸ. ಉ.ಹಿ.ಪ್ರಾ.ಶಾಲೆ. ಅಮರಪಡ್ನೂರು (ಅಜ್ಜನಗದ್ದೆ) ಇಲ್ಲಿಯ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಎಸ್. ಡಿ. ಎಂ. ಸಿ. ಗೆ ಜಿಲ್ಲಾ ಮಟ್ಟದ ಅತ್ಯುತ್ತ ಮ ಎಸ್. ಡಿ. ಎಂ. ಸಿ. ಎಂದು ಪರಿಗಣಿಸಿ ಜಿಲ್ಲಾಮಟ್ಟದಲ್ಲಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಶಾಲಾ ಎಸ್.ಡಿ.ಎಂ. ಸಿ. ಅಧ್ಯಕ್ಷರಾದ ಈಶ್ವರ ಕಾಯರ, ಉಪಾಧ್ಯಕ್ಷರಾದ ಗೀತಾ ದಿನೇಶ್ ಕೊರತ್ಯಡ್ಕ, ಸದಸ್ಯರು ಗಳಾದ ವೆಂಕಟ್ರಮಣ, ಚಂದ್ರಶೇಖರ, ಮೋಹಿನಿ, ಸುಜಾತಾ, ರತ್ನಾವತಿ, ಗಿರಿಜಾ ಪಿ, ಗಿರಿಜಾ ಎಂ, ಭವಾನಿ ಮೊದಲಾದವರು ಉಪಸ್ಥಿತರಿದ್ದರು.