ಶುಭದ ಆರ್. ಪ್ರಕಾಶ್ ರವರಿಗೆ ಕಲಾಭೂಷಣ ರಾಜ್ಯ ಪ್ರಶಸ್ತಿ

0


ಗಡಿನಾಡ ಧ್ವನಿ ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಕೊಡ ಮಾಡುವ ಕಲಾಭೂಷಣ ರಾಜ್ಯ ಪ್ರಶಸ್ತಿಗೆ ಜಿ ಟಿವಿ ಸರಿಗಮಪ ಖ್ಯಾತಿಯ ಶುಭದ ಆರ್. ಪ್ರಕಾಶ್ ಭಾಜನರಾಗಿದ್ದಾರೆ.


ಕಲೆ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿನ ಸೇವೆಯನ್ನು ಗಮನಿಸಿ  ಈ ಪ್ರಶಸ್ತಿಯನ್ನ ಘೋಷಿಸಲಾಗಿದ್ದು, ಫೆಬ್ರವರಿ 26ರಂದು ನಡೆದ ಕರ್ನಾಟಕ ಗಡಿನಾಡ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸುಳ್ಯದ ಸೂರ್ತಿಲ ನಿವಾಸಿ ರವಿಪ್ರಕಾಶ್ ಜಯಶ್ರೀ ದಂಪತಿಗಳ ಪುತ್ರಿ ಪ್ರಸ್ತುತ ಪುತ್ತೂರು ವಿವೇಕಾನಂದ ಕಾಲೇಜಿನ ಪ್ರಥಮ ಬಿಬಿಎ ವಿದ್ಯಾರ್ಥಿನಿ.