ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ವೇದಿಕೆ ವತಿಯಿಂದ 21 ನೇ ವರ್ಷಾಚರಣೆ ಪ್ರಯುಕ್ತ ಫೆ. ೨೮ರಂದು ಮಾಣಿ ನೇರಳಕಟ್ಟೆ ಜನಪ್ರಿಯ ಗಾರ್ಡನ್ನಲ್ಲಿ ನಡೆದ ಕ್ರಿಯಾಶೀಲ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಗಳ ಅಭಿನಂದನೆ ಹಾಗೂ ದ.ಕ. ಜಿಲ್ಲಾ ಮಟ್ಟದ ದ್ವಿತೀಯ ಸಮಾವೇಶದಲ್ಲಿ ದೇವಚಳ್ಳ ಸ.ಹಿ.ಪ್ರಾ.ಶಾಲಾ ಎಸ್ಡಿಎಂಸಿಯನ್ನು ಗೌರವಿಸಲಾಯಿತು.
ಎಸ್ಡಿಎಂಸಿ ಅಧ್ಯಕ್ಷರಾದ ಜಯಪ್ರಕಾಶ್ ಕೆ., ಸದಸ್ಯರುಗಳಾದ ಜಯಂತ ಹರ್ಲಡ್ಕ, ಕುಸುಮಾಧರ ಎ., ಓಪ್ರಸಾದ್ ಕಜೆ, ಜಯಾನಂದ ಪಟ್ಟೆ, ಆನಂದ ತಳೂರು, ವಿನೋದ ಪಟ್ಟೆ, ಸುನೀತಾ ಎಂ.ಆರ್. ಸತ್ಯ ಕಾಯರಡಿ ಉಪಸ್ಥಿತರಿದ್ದು, ಗೌರವ ಸ್ವೀಕರಿಸಿದರು.