ಎಸ್. ಡಿ. ಎಮ್. ಸಿ. ಜಿಲ್ಲಾ ಸಮಾವೇಶದಲ್ಲಿ ಉಬರಡ್ಕ ಮಿತ್ತೂರು ಸ. ಹಿ. ಪ್ರಾ.ಶಾಲೆಯ ಮಾಜಿ ಅಧ್ಯಕ್ಷೆ ಗೆ ಜಿಲ್ಲಾ ಮಟ್ಟದ ಪ್ರಶಸ್ತಿ

0

ಕರ್ನಾಟಕ ರಾಜ್ಯ ಎಸ್ ಡಿ ಎಂ ಸಿ ಸಮನ್ವಯ ವೇದಿಕೆ, ದಕ್ಷಿಣ ಕನ್ನಡ ಶಾಲಾ ಶಿಕ್ಷಣ ಮತ್ತು ಸಾಕ್ಷಾರತ ಇಲಾಖೆ ಇದರ ಸಹಯೋಗದಲ್ಲಿ 21 ನೇ ವರ್ಷ ಆಚರಣೆ ಪ್ರಯುಕ್ತ ಜಿಲ್ಲಾ ಮಟ್ಟದ ಕ್ರಿಯಾಶೀಲ ಮೇಲುಸ್ತುವರಿ ಸಮಿತಿ ಗಳಿಗೆ ಅಭಿನಂದನ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಗಿತ್ತು.


ಈ ಕಾರ್ಯಕ್ರಮ ಮಾಣಿ ನೇರಳೆಕಟ್ಟೆ ಜನಪ್ರಿಯ ಗಾರ್ಡನ್ ನಲ್ಲಿ ಪೆಬ್ರವರಿ 28ರಂದು ನಡೆಯಿತು. ಸರ್ಕಾರಿ ಶಾಲೆಗಳ ಎಸ್ ಡಿ ಎಂ ಸಿ ಸಮಿತಿಯವರ ಅತ್ಯುತಮ ಕೆಲಸ ಕಾರ್ಯಗಳನ್ನು ಪರಿಶೀಲಿಸಿ ಜಿಲ್ಲಾ ಮಟ್ಟದಲ್ಲಿ ಗೌರವಿಸಿ ಉಬರಡ್ಕ ಮಿತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷೆ ರಾಜೇಶ್ವರಿ ಕಾಡುತೋಟದವರನ್ನು ಪ್ರಶಸ್ತಿ ನೀಡಿ ಸನ್ಮಾನಿಸಿದರು.