ಸುಬ್ರಹ್ಮಣ್ಯ:”ಶ್ರೀ ವಿಷ್ಣುತೀರ್ಥ ” ಸಂಕೀರ್ಣ ಲೋಕಾರ್ಪಣೆ

0

ಶ್ರೀ ಸುಬ್ರಹ್ಮಣ್ಯ ಮಠದ ನೂತನ ವಾಣಿಜ್ಯ ಸಂಕೀರ್ಣ ಮತ್ತು ವಸತಿಗೃಹವಾದ “ಶ್ರೀ ವಿಷ್ಣುತೀರ್ಥ ಸಂಕೀರ್ಣ ದ ಉದ್ಘಾಟನೆಗೊಂಡು ಇಂದು ಲೋಕಾರ್ಪಣೆಗೊಂಡಿತು.

ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಬಳಿಕ ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀಗಳಾದ ವಿದ್ಯಾಪ್ರಸನ್ನ ಸ್ವಾಮಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಶ್ರೀ ಮಠದ ದಿವಾನರಾದ ಸುದರ್ಶನ ಜೋಯಿಸ, ಯಜ್ಞೇಶ್ ಆಚಾರ್, ವೇಣುಗೋಪಾಲ ಆಚಾರ್,ವೇಣುಗೋಪಾಲ ಶಾಸ್ತ್ರಿ, ಸುಬ್ರಹ್ಮಣ್ಯ ಗ್ರಾ. ಪಂ. ಸದಸ್ಯ ಹರೀಶ ಇಂಜಾಡಿ, ಕಿಶೋರ ಅರಂಪಾಡಿ, ಗಣೇಶ ನಾಯರ್, ಸರ್ವೋತ್ತಮ ಕಾಮತ್, ರವಿ ಕಕ್ಕೆಪದವು, ಅಶೋಕ ಶೆಟ್ಟಿ, ದಯಾನಂದ ಶೆಟ್ಟಿ, ರವೀಂದ್ರ ನೂಚಿಲ, ಇಂಜನಿಯರ್ ಸಚ್ಚಿದಾನಂದ, ಶ್ರೀ ಮಠದ ಪುರೋಹಿತ ವರ್ಗ ಹಾಗೂ ಸಿಬ್ಬಂದಿಗಳು ಮತ್ತು ನೂರಾರು ಸ್ಥಳೀಯರು ಉಪಸ್ಥಿತರಿದ್ದರು.