ದುಗ್ಗಲಡ್ಕ; ದುಗ್ಗಲಾಯ ದೈವಸ್ಥಾನದ ನಡುಬೆಟ್ಟು ಚಾವಡಿಯಲ್ಲಿ ದುರ್ಗಾಪೂಜೆ

0

ದುಗ್ಗಲಡ್ಕದ ದುಗ್ಗಲಾಯ ದೈವಸ್ಥಾನದ ನಡುಬೆಟ್ಟು ಚಾವಡಿಯಲ್ಲಿ ಇಂದು ದುರ್ಗಾಪೂಜೆ ಮತ್ತು ದೈವಗಳಿಗೆ ತಂಬಿಲ ನಡೆಯಿತು.
ಬೆಳಗ್ಗೆ ನಾಗದೇವರಿಗೆ ತಂಬಿಲ ನಡೆದು ಬಳಿಕ ನಡುಬೆಟ್ಟು ಚಾವಡಿಯಲ್ಲಿ ದುರ್ಗಾಪೂಜೆ ಮತ್ತು ದೈವಗಳಿಗೆ ತಂಬಿಲ ನಡೆಯಿತು.ದೈವಗಳಿಗೆ ಚಿನ್ನದ ಹೂ ಅರ್ಪಿಸಲಾಯಿತು. ಮಧ್ಯಾಹ್ನ ಮಹಾಪೂಜೆ,ಪ್ರಸಾದ ವಿತರಣೆ, ಅನ್ನಸಂತರ್ಪಣೆ ನೆರವೇರಿತು. ಜೋಗಿಯಡ್ಕ ರಾಧಾಕೃಷ್ಣ ಭಟ್ ಮತ್ತು ಬಳಗದವರು ವೈದಿಕ ಕಾರ್ಯ ನೆರವೇರಿಸಿದರು.


ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರ ರಾಘವೇಂದ್ರ ಭಟ್ ಕಲ್ದಂಬೆ, ಅಧ್ಯಕ್ಷ ಸುಂದರ ರಾವ್, ಗೌರವಾಧ್ಯಕ್ಷ ದಯಾನಂದ ಸಾಲಿಯಾನ್ ಮೂಡೆಕಲ್ಲು, ಕಾರ್ಯದರ್ಶಿ ಕಜೆ ಕುಶಾಲಪ್ಪ ಗೌಡ, ಮಹಿಳಾ ಸಮಿತಿ ಅಧ್ಯಕ್ಷೆ ಪ್ರಭಾವತಿ ರೈ, ಯುವ ಸೇವಾ ಸಂಘದ ಅಧ್ಯಕ್ಷ ನಾರಾಯಣ ನಾಯ್ಕ್, ನಗರ ಪಂಚಾಯತ್ ಸದಸ್ಯ ಬಾಲಕೃಷ್ಣ ರೈ ದುಗ್ಗಲಡ್ಕ, ಪದಾಧಿಕಾರಿಗಳಾದ ಯತೀಶ್ ರೈ ದುಗ್ಗಲಡ್ಕ, ದಿನೇಶ್ ಡಿ.ಕೆ. ದುಗ್ಗಲಡ್ಕ, ಗಿರಿಧರ ಗೌಡ ನೆಕ್ರಾಜೆ, ಶ್ಯಾಮ್ ಭಟ್ ಮೂಡೆಕಲ್ಲು
, ಮೊದಲಾದವರು, ಸಮಿತಿಗಳ ಸದಸ್ಯರು,ಊರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here