ಕಂದಡ್ಕ; ಅಸೌಖ್ಯದಿಂದ ಯುವಕ ನಿಧನ

0


ಅಮರಮುಡ್ನೂರು ಗ್ರಾಮದ ಮುಂಡೋಕಜೆ ನಿವಾಸಿ ಸೋಮಪ್ಪ ನಾಯ್ಕ ಎಂಬವರ ಮಗ ವಿನಯಕುಮಾರ್ ಎಂಬವರು ಅಸೌಖ್ಯದಿಂದಾಗಿ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 30 ವರ್ಷ ವಯಸ್ಸಾಗಿತ್ತು.
ಕೆಳ ದಿನಗಳ ಹಿಂದೆ ಅನಾರೋಗ್ಯಕ್ಕೊಳಗಾದ ವಿನಯಕುಮಾರರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾದರು.
ಮೃತರು ತಂದೆ, ಸಹೋದರ ಸುರೇಶ್, ಸಹೋದರಿ ಸೌಮ್ಯ ಹಾಗೂ ಬಂಧುಗಳನ್ನು ಅಗಲಿದ್ದಾರೆ.