ಪೆರಾಜೆ : ಬೈಕ್ ಸ್ಕಿಡ್, ಚಾಲಕನಿಗೆ ಗಾಯ

0

ಸುಳ್ಯದಿಂದ ಪೆರಾಜೆಗೆ ಹೋಗುತ್ತಿದ್ದ ಬೈಕ್ ಸವಾರ ಶ್ರೀ ಶಾಸ್ತವು ದೇವಸ್ಥಾನದ ದ್ವಾರದ ಬಳಿಯ ಆಚಾರಿ ಕೊಟ್ಟಿಗೆಯ ಬಳಿ ಬೈಕ್ ನಿಯಂತ್ರಣ ತಪ್ಪಿ ಬಿದ್ದು ಸವಾರ ಗಾಯಗೊಂಡು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ವರದಿಯಾಗಿದೆ.

ಗಾಯಗೊಂಡ ಯುವಕ ದಯಾನಂದ ಗರುಗುಂಜ ಎಂದು ತಿಳಿದುಬಂದಿದೆ. ಸ್ಥಳೀಯ ಯುವಕ ದೀನರಾಜು ದೊಡ್ಡಡ್ಕ ಮತ್ತು ತಂಡದವರು ಆತನನ್ನು ಆಂಬುಲೆನ್ಸ್ ಮೂಲಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.