ಸಂಪಾಜೆಯಲ್ಲಿ ನದಿಯ ಹೂಳೆತ್ತಬೇಕು – ತಡೆಗೊಡೆ ನಿರ್ಮಿಸಬೇಕು : ಗ್ರಾಮಸ್ಥರ ಬೇಡಿಕೆ

0

ಇಲಾಖೆಗಳಿಗೆ ಅಲೆದು ಸಾಕಾಗಿದೆ – ಸಮಸ್ಯೆ ಪರಿಹರಿಸದಿದ್ದರೆ ಮತದಾನ ಬಹಿಷ್ಕಾರ, ಉಗ್ರ ಹೋರಾಟ ; ಪ್ರಧಾನಿ ಕಚೇರಿಗೂ ದೂರು

ಸಂಪಾಜೆ ಗ್ರಾಮ ವ್ಯಾಪ್ತಿಯಲ್ಲಿ ಹರಿಯುವ ನದಿಗಳಲ್ಲಿ ತುಂಬಿರುವ ಹೂಳನ್ನು ಮುಂದಿನ ಮಳೆಗಾಲದೊಳಗೆ ಮೇಲೆತ್ತಬೇಕು. ನದಿ ಬದಿಯಲ್ಲಿ ಪೇಟೆಗೆ ಸುತ್ತ ತಡೆಗೋಡೆ ಮಾಡುವುದಾಗಿ ಕಳೆದ ಬಾರಿ ಪ್ರಾಕೃತಿಕ ವಿಕೋಪ ಸಂಭವಿಸಿದ ಸಂದರ್ಭ ಅಧಿಕಾರಿಗಳು ಭರವಸೆ ನೀಡಿದ್ದರೂ ಇನ್ನೂ ಕಾರ್ಯಪ್ರವೃತ್ತವಾಗಿಲ್ಲ. ಈ ನಮ್ಮ ಬೇಡಿಕೆಯನ್ನು ಈ ಬಾರಿ ಈಡೇರಿಸದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆ. ಕೆಲಸ ಮಾಡಿಕೊಡುವಂತೆ ಇಲಾಖೆಗಳಿಗೆ ಅಲೆದಾಡಿದರೂ ಅಧಿಕಾರಿಗಳು ಸ್ಪಂದನೆ ನೀಡುತ್ತಿಲ್ಲ. ಆದ್ದರಿಂದ ಎಲ್ಲ ದಾಖಲೆಗಳನ್ನಿಟ್ಟು ಪ್ರಧಾನ ಮಂತ್ರಿಗಳ ಕಚೇರಿಗೂ ದೂರು ನೀಡುತ್ತೇವೆಂದು ಸಂಪಾಜೆ ಗ್ರಾಮದ ಕೃಷಿಕರು ಹಾಗೂ ಉದ್ಯಮಿಗಳು ತಿಳಿಸಿದ್ದಾರೆ.


ಮಾ.೧೦ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಈ ವಿವರ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್ “ಕಳೆದ ಕೆಲವು ವರ್ಷಗಳಿಂದ ಸಂಭವಿಸುತ್ತಿರುವ ಪ್ರಾಕೃತಿಕ ವಿಕೋಪಗಳಿಂದ ಸಂಪಾಜೆಯ ಗ್ರಾಮಸ್ಥರು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದು, ಕಳೆದ ವರ್ಷವಂತು ನಲುಗಿದ್ದಾರೆ. ೨೦೧೮ ರ ಜೋಡುಪಾಲ ದುರಂತದಿಂದ ಹಿಡಿದು ಕಳೆದ ವರ್ಷದವರೆಗೆ ಮಳೆಗಾಲದಲ್ಲಿ ಇಲ್ಲಿನ ರೈತರು, ವರ್ತಕರು ಮತ್ತು ನಿವಾಸಿಗಳು ಕೃಷಿ, ವ್ಯಾಪಾರ, ಮನೆ, ಕಳೆದುಕೊಂಡು ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ಈ ವರ್ಷವೂ ಕೂಡ ಮಳೆಗಾಲದಲ್ಲಿ ಸಂಕಷ್ಟ ಎದುರಾಗುವ ಸಾಧ್ಯತೆಗಳಿದ್ದು ಇಲ್ಲಿನ ಸಮಸ್ಯೆಗಳಿಗೆ ಸರ್ಕಾರ ಶಾಶ್ವತ ಪರಿಹಾರ ಒದಗಿಸಬೇಕು. ಕಳೆದ ವರ್ಷಗಳ ಪ್ರವಾಹದಿಂದ ಹೊಳೆಯಲ್ಲಿ ಹೂಳು ನಿಂತಿದ್ದು ಇನ್ನೂ ಅದನ್ನು ತೆಗೆದಿಲ್ಲ. ಹೂಳು ತುಂಬಿ ನದಿಯ ಹೊಂಡಗಳೆಲ್ಲ ತುಂಬಿ ನೀರಿನ ಅಭಾವ ಎದುರಾಗಿದೆ. ಪ್ರಾಕೃತಿಕ ವಿಕೋಪದ ಸಂದರ್ಭ ಸಚಿವರು ಮತ್ತು ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಪರಿಹಾರದ ಭರವಸೆ ನೀಡಿದ್ದಾರೆಯೇ ಹೊರತು, ಅಂಗಡಿಗಳಿಗೆ ನೀರು ತುಂಬಿ ತೊಂದರೆಗೊಳಗಾದ ವ್ಯಾಪಾರಸ್ಥರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಸಂಪಾಜೆ ಪೇಟೆಯಲ್ಲಿ ನದಿ ಬದಿಗೆ ತಡೆಗೋಡೆ ಕಟ್ಟಿ ಕೊಡುವುದಾಗಿ ಹೇಳಿದ್ದರೂ ಇನ್ನೂ ಮಾಡಿಲ್ಲ. ಈ ಬಾರಿಯ ಮಳೆಗಾಲಕ್ಕೂ ಮುನ್ನ ಕಾರ್ಯಪ್ರವೃತ್ತರಾಗದಿದ್ದರೆ ಹೋರಾಟ ನಡೆಸುವುದು ಅನಿವಾರ್ಯ ಎಂದು ಅವರು ಹೇಳಿದರು.

ವಿದ್ಯುತ್ ಸಮಸ್ಯೆ ಬಗೆಹರಿಸಿ :

ಸಂಪಾಜೆ, ಚೆಂಬು, ಕಲ್ಲುಗುಂಡಿ ಭಾಗದಲ್ಲಿ ವಿದ್ಯುತ್ ಸಮಸ್ಯೆಯಿಂದ ಲೋವೋಲ್ಟೇಜ್ ಇದೆ. ಕೃಷಿಕರಿಗೆ ಕುಡಿಯುವ ನೀರಿಗೆ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಸಂಪಾಜೆ ೦.೩೩ ಕೆ.ವಿ. ಸಬ್‌ಸ್ಟೇಷನ್ ಕಾಮಗಾರಿ ಆರಂಭಿಸಬೇಕು ಎಂದು ಜಿ.ಕೆ. ಹಮೀದ್ ಒತ್ತಾಯಿಸಿದರಲ್ಲದೆ, ಸರ್ಕಾರವು ಗೋರಖ್ ಸಿಂಗ್ ವರದಿ ಜಾರಿ ಮಾಡಿ ರೈತರಿಗೆ ಬಡ್ಡಿರಹಿತ ೧೦ ಲಕ್ಷ ಸಾಲ ಕೊಡಬೇಕು.ಹಾಗೂ ಪ್ರಾಕೃತಿಕ ವಿಕೋಪ ಸಂದರ್ಭ ಕೃಷಿಗೆ ಹಾನಿಯಾದ ಕೃಷಿಕರಿಗೆ ಸರಿಯಾದ ಪರಿಹಾರ ಸಿಗುವಂತಾಗಬೇಕೆಂದು ಆಗ್ರಹಿಸಿದರು.
ಪ್ರಧಾನಿ ಕಚೇರಿಗೆ ದೂರು : ಕೃಷಿಕ ರವಿಶಂಕರ್ ಭಟ್ ಮಾತನಾಡಿ ನದಿಯಲ್ಲಿ ತುಂಬಿದ ಹೂಳೆತ್ತಬೇಕು. ತಡೆಗೋಡೆ ನಿರ್ಮಿಸಬೇಕು. ಈ ಕುರಿತು ಗಣಿ ಇಲಾಖೆಗೆ ಕಳೆದ ಏಳೆಂಟು ತಿಂಗಳಿನಿಂದ ನಾನು ಅಲೆದಾಡುತ್ತಿzನೆ. ಗಣಿ ಇಲಾಖೆಯ ಅಧಿಕಾರಿಗಳು ಸ್ಪಂದನೆ ನೀಡುತ್ತಿಲ್ಲ. ಒಮ್ಮೆ ಹೋಗುವಾಗ ಒಂದೊಂದು ದಾಖಲೆ ಕೇಳುತ್ತಿದ್ದಾರೆ. ಸಂಪಾಜೆ ಗ್ರಾಮದ ನಕ್ಷೆಗಾಗಿ ನಾನು ಅಲೆದಾಡಿದ ವಿಷಯವೇ ದೊಡ್ಡದು. ತಾಲೂಕು ಕಚೇರಿಯಲ್ಲೇ ಗ್ರಾಮದ ನಕ್ಷೆ ಸಿಗದೇ ಬಳಿಕ ಉಗ್ರಾಣಿಯವರಲ್ಲಿ ಇದ್ದುದನ್ನು ನಾನೇ ತಾಲೂಕು ಕಚೇರಿಗೆ ಕೊಟ್ಟಿzನೆ. ನಮ್ಮ ಸಮಸ್ಯೆಗಳ ಕುರಿತು ಸಚಿವರುಗಳಾದ ಆರ್.ಅಶೋಕ್, ಎಸ್.ಅಂಗಾರ, ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿದೆ. ಗಣಿ ಇಲಾಖೆಯ ಅಧಿಕಾರಿಗಳಿಗೆ ಕೊನೆಯದಾಗಿ ಕೇಳಿಕೊಳ್ಳುತ್ತೇನೆ. ಇಲ್ಲವಾದರೆ ಎಲ್ಲ ದಾಖಲೆಗಳನ್ನಿಟ್ಟು ಪ್ರಧಾನ ಮಂತ್ರಿ ಕಚೇರಿಗೂ ದೂರಿಕೊಳ್ಳಲಾಗುವುದು. ನಮ್ಮ ಬೇಡಿಕೆ ಈಡೇರದಿದ್ದರೆ ಮುಮದಿನ ಚುನಾವಣೆ ಬಹಿಷ್ಕರಿಸುವ ಸಂದರ್ಭವೂ ಬರಬಹುದು ಎಂದು ಅವರು ಬೇಸರ ತೋಡಿಕೊಂಡರು. ಬದುಕಿಗಾಗಿ ಹೋರಾಟ : ಉದ್ಯಮಿ ಪದ್ಮನಾಭ ಗೌಡರು ಮಾತನಾಡಿ `'ನದಿಯ ಹೂಳೆತ್ತದಿದ್ದರೆ ಇ ಬಾರಿಯೂ ಸಮಸ್ಯೆ ಎದುರಾದೀತು. ಮಳೆ ಬರುವ ಮೊದಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಲಿ. ಅಪಾಯ ಆದ ಮೇಲೆ ಬಂದು ಪ್ರಯೋಜನವಿಲ್ಲ. ಇದು ನಮ್ಮ ಬದುಕಿಗಾಗಿ ಹೋರಾಟ'' ಎಂದು ಹೇಳಿದರು. ಅಧಿಕಾರಿಗಳು ಉದಾಸೀನ ಬಿಡಬೇಕು ; ಕೆ.ಪಿ.ಸಿ.ಸಿ. ವಕ್ತಾರ ಟಿ.ಎಂ. ಶಹೀದ್ ಮಾತನಾಡಿಜೋಡುಪಾಲದ ದುರಂತದ ಬಳಿಕ ಸಮಸ್ಯೆಗಳು ಪ್ರತೀ ವರ್ಷ ಸಂಭವಿಸುತ್ತಿದೆ. ಇದನ್ನು ಅಧಿಕಾರಿಗಳು ಗಮಭೀರವಾಗಿ ತಗೊಂಡಿಲ್ಲ. ಕರಷಿಕರು ಏಳುತಿಂಗಳಿನಿಂದ ಇಲಾಖೆಗಳಿಗೆ ಅಲೆದರೂ ಸ್ಪಂದನೆ ಸಿಗುತ್ತಿಲ್ಲವಾದರೆ ಹೇಗೆ? ಅಧಿಕಾರಿಗಳು ಉದಾಸೀನ ಬಿಟ್ಟು ಕೆಲಸ ಮಾಡಬೇಕು. ಸಂಪಾಜೆಯಲ್ಲಿ ಭೂಕಂಪ, ಪ್ರಳಯದಿಂದ ಭಾರೀ ಪ್ರಮಾಣದಲ್ಲಿ ನಾಶ ನಷ್ಟ ಉಂಟಾಗಿತ್ತು. ಕೃಷಿಕರು, ವರ್ತಕರು, ಜನ ಸಾಮಾನ್ಯರು ದೊಡ್ಡ ನಷ್ಟವನ್ನು ಅನುಭವಿಸಿದ್ದರು. ಇದರ ವೀಕ್ಷಣೆಗೆ ರಾಜ್ಯದ ಮುಖ್ಯಮಂತ್ರಿ, ಸಚಿವರುಗಳು ಬಂದರೂ ಏನೂ ಪ್ರಯೋಜನ ಆಗಲಿಲ್ಲ ಎಂದು ಹೇಳಿದರು.


ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರುಗಳಾದ ಅಬೂಸಾಲಿ ಹಾಗೂ ಜಗದೀಶ್ ರೈ ಮಾತನಾಡಿ, “ಮಳೆಗಾಲದ ಮೊದಲು ಇಲಾಖೆ ಎಚ್ಚೆತ್ತುಕೊಳ್ಳಬೇಕು ಎನ್ನುವುದು ನಮ್ಮ ಬೇಡಿಕೆ. ಕಳೆದ ಬಾರಿ ಕೃಷಿಕರು ತುಂಬಾ ನಷ್ಟ ಅನುಭವಿಸಿದ್ದಾರೆ. ಇದೆಲ್ಲವನ್ನು ಸರಕಾರ ಹಾಗೂ ಅಧಿಕಾರಿಗಳು ಮನಗಮಡು ನಮ್ಮ ಬೇಡಿಕೆಗೆ ಸ್ಪಂದಿಸಬೇಕೆಂದು ಕೇಳಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ಎಸ್.ಕೆ. ಹನೀಫ್ ಇದ್ದರು.