ಪುಣೇರಿಯಲ್ಲಿ ಶ್ರೀ ಅಣ್ಣಪ್ಪ ಪಂಜುರ್ಲಿ ಮತ್ತು ಶ್ರೀ ಕರಿಚಾಮುಂಡಿ ದೈವಗಳ ಪುನರ್ ಪ್ರತಿಷ್ಠೆ ಮತ್ತು ನೇಮೋತ್ಸವ

0

ಧರ್ಮದೈವ ಶ್ರೀ ಅಣ್ಣಪ್ಪ ಪಂಜುರ್ಲಿ ಮತ್ತು ಶ್ರೀ ಕರಿಚಾಮುಂಡಿ ದೈವಸ್ಥಾನ ಪುಣೇರಿ ಬಾಳುಗೋಡು ಇಲ್ಲಿ ಶ್ರೀ ಅಣ್ಣಪ್ಪ ಪಂಜುರ್ಲಿ ಮತ್ತು ಶ್ರೀ ಕರಿಚಾಮುಂಡಿ ದೈವಗಳ
ಪುನರ್ ಪ್ರತಿಷ್ಠೆ ಮತ್ತು ನೇಮೋತ್ಸವ ಕಾರ್ಯಕ್ರಮಗಳು ಮಾ.8 ರಿಂದ ಮಾ. 10 ರ ತನಕ ನಡೆಯಿತು.


ಮಾ.8 ರ ಸಂಜೆ ತಂತ್ರಿಗಳ ಆಗಮನವಾಗಿ. ಮಾ.9 ರ ಬೆಳಗ್ಗೆ ಮೀನ ಲಗ್ನದಲ್ಲಿ
ದೈವಗಳ ಪುನರ್ ಪ್ರತಿಷ್ಠೆ ನಡೆಯಿತು. ಅದೇ ದಿನ ಬೆಳಿಗ್ಗೆ ಶ್ರೀ ವಿಷ್ಣುಮೂರ್ತಿ ದೈವದ ಕೊಳ್ಳಿ ಮುಹೂರ್ತ ನಡೆಯಿತು. ಶ್ರೀ ದೈವಗಳ ಭಂಡಾರ ತೆಗೆದು ಅನ್ನ ಸಂತರ್ಪಣೆ ಬಳಿಕ ಕಲ್ಲುರ್ಟಿ, ಕೊರತಿ, ಮಂತ್ರವಾದಿ ಗುಳಿಗ ದೈವದ ನೇಮೋತ್ಸವ ನಡೆಯಿತು.

ರಾತ್ರಿ ಶ್ರೀ ಕರಿಚಾಮುಂಡಿ ದೈವದ ನೇಮ ನಡೆದು ಮಾ.10 ರ ಪ್ರಾತಃಕಾಲ ಧರ್ಮದೈವ ಶ್ರೀ ಅಣ್ಣಪ್ಪ ಪಂಜುರ್ಲಿ ದೈವದ ನೇಮೋತ್ಸವ ನಡೆದು ಪ್ರಸಾದ ವಿತರಣೆ ನಡೆಯಿತು. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಕುಂಞ‌ ಮುಗೇರ ಕುಟುಬಂಸ್ಥರು, ಆಡಳಿತ ಮಂಡಳಿ ಹಾಗೂ ಊರ ಭಕ್ತರು ಸಹಕರಿಸಿದರು.