ಕುಮಾರ ಬೆಳ್ಚಪ್ಪಾಡ ಕುಕ್ಕುಜಡ್ಕ ನಿಧನ

0

ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕ ನಿವಾಸಿ ಕುಮಾರ ಬೆಳ್ಚಪ್ಪಾಡ ರವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಾ.10 ರಂದು ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು.
ಮೃತರು ಅಲ್ಪ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ. ಮೃತರು ಪತ್ನಿ ಶ್ರೀಮತಿ ನಳಿನಿ, ಪುತ್ರರಾದ ರಾಧಾಕೃಷ್ಣ, ಪುರುಷೋತ್ತಮ, ಪುತ್ರಿ ಶ್ರೀಮತಿ ವಿದ್ಯಾ, ಅಳಿಯ ಸುರೇಶ್ ಕಾಸರಗೋಡು, ಸಹೋದರರಾದ ದಿವಾಕರ ಕುಕ್ಕುಜಡ್ಕ,ಹರಿಶ್ಚಂದ್ರ ಕುಕ್ಕುಜಡ್ಕ, ಸೋಮನಾಥ ಗುತ್ತಿಗಾರು,ಕುಂಞಕಣ್ಣ ಕುಕ್ಕುಜಡ್ಕ,ಸೊಸೆಯಂದಿರಾದ ಶ್ವೇತ, ಮೋನಿಷಾ ಹಾಗೂ ಮೊಮ್ಮಕ್ಕಳನ್ನು, ಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ.