ಸುಳ್ಯಕ್ಕೆ ಆಗಮಿಸಿದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ
ನಗರದಲ್ಲಿ ಅದ್ಧೂರಿ ರೋಡ್‌ಶೋ- ಸಾವಿರ ಸಾವಿರ ಕಾರ್ಯಕರ್ತರು ಭಾಗಿ

0

ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ರಾಜ್ಯಾಧ್ಯಂತ ಪ್ರಚಾರ ಆರಂಭಿಸಿರುವ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಇಂದು ಸುಳ್ಯಕ್ಕಾಗಮಿಸಿದೆ. ಸುಳ್ಯದಲ್ಲಿ ಸಚಿವ ಎಸ್.ಅಂಗಾರರ ನೇತೃತ್ವದಲ್ಲಿ ಯಾತ್ರೆ ನಡೆಯಿತು.


ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಸಚಿವ ಸುನಿಲ್‌ಕುಮಾರ್ ಸಹಿತ ಹಲವು ಮಂದಿ ನಾಯಕರು ಆಗಮಿಸಿದ್ದರು. ಸುಳ್ಯದ ವಿಷ್ಣು ಸರ್ಕಲ್‌ನಿಂದ ರೋಡ್‌ಶೋಗೆ ಚಾಲನೆ ನೀಡಲಾಯಿತು. ಸಾವಿರ ಸಾವಿರ ಸಂಖ್ಯೆಯಲ್ಲಿ ಕಾರ್ಯಕರ್ತರು ಈ ರೋಡ್‌ಶೋದಲ್ಲಿ ಭಾಗವಹಿಸಿದ್ದರು.


ಮಧ್ಯಾಹ್ನದ ವೇಳೆಗೆ ವಿಜಯ ಸಂಕಲ್ಪ ಯಾತ್ರೆಗೆ ಸಂಪಾಜೆ ಭೇಟಿಗೆ ಆಗಮಿಸಿತ್ತು. ಅಲ್ಲಿ ಸಚಿವ ಎಸ್.ಅಂಗಾರರ ನೇತೃತ್ವದಲ್ಲಿ ಯಾತ್ರೆಯನ್ನು ಬರಮಾಡಿಕೊಳ್ಳಲಾಯಿತು. ಅಲ್ಲಿಂದ ಮುಂದುವರಿದ ಯಾತ್ರೆ ೨ ಗಂಟೆಯ ಸುಮಾರಿಗೆ ಸರಳಿಕುಂಜಕ್ಕೆ ತಲುಪಿತು. ಸರಳಿಕುಂಜ ಜಗದೀಶ್‌ರವರ ಮನೆಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ನಾಯಕರು ಹಾಗೂ ಕಾರ್ಯಕರ್ತರು ಅಲ್ಲಿ ಭೋಜನ ಸವಿದರು. ೩ ಗಂಟೆಯ ವೇಳೆಗೆ ಅಲ್ಲಿಂದ ವಿಜಯ ಸಂಕಲ್ಪ ಯಾತ್ರೆ ವಿಷ್ಣು ಸರ್ಕಲ್‌ಗೆ ಬಂತು.