ಹಿರಿಯ ಉದ್ಯಮಿ, ಪಾಕಶಾಸ್ತ್ರಜ್ಞ ನಾರಾಯಣ ಗೌಡ ಜಬಳೆ ನಿಧನ

0


ಜಾಲ್ಸೂರಿನ ಹಿರಿಯ ಉದ್ಯಮಿಗಳೂ, ಪ್ರಗತಿಪರ ಕೃಷಿಕರೂ, ಪಾಕಶಾಸ್ತ್ರಜ್ಞರಾದ ನಾರಾಯಣ ಗೌಡ ಜಬಳೆ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಮಾ.11ರಂದು ಅಪರಾಹ್ನ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು.
ಜಾಲ್ಸೂರಿನಲ್ಲಿ ಅಂಗಡಿ ನಡೆಸುತ್ತಿದ್ದ ನಾರಾಯಣ ಗೌಡರು ಹಲವು ವರ್ಷಗಳ ಕಾಲ ಅಡುಗೆ ಕೆಲಸಗಳಲ್ಲಿ ಜನಮೆಚ್ಚುಗೆ ಪಡೆದಿದ್ದು, ಜಬಳೆ ಎಂದೇ ಚಿರಪರಿಚಿತರಾಗಿದ್ದರು.
ಮೃತರು ಪತ್ನಿ ಶ್ರೀಮತಿ ಗಿರಿಜ, ಪುತ್ರರಾದ ಕೇಶವ ಜಬಳೆ, ನವೀನ ಜಬಳೆ, ಪುತ್ರಿಯರಾದ ಶೀಲಾವತಿ, ಶೀತಲ್ ಸೇರಿದಂತೆ ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.