ಮಾ.25; ಅರಂತೋಡು ಗ್ರಾಮ ಪಂಚಾಯತ್ ಅಮೃತ ಉದ್ಯಾನವನ, ಅಮೃತ ಮುಕ್ತಿ ಧಾಮ ಹಾಗೂ ಅಮೃತ ಸಭಾಂಗಣದ ಉದ್ಘಾಟನೆ

0

ಅರಂತೋಡು ಗ್ರಾಮ ಪಂಚಾಯತ್ ವತಿಯಿಂದ ನೂತನವಾಗಿ ನಿರ್ಮಿಸಲಾದ ಅಮೃತ ಉದ್ಯಾನವನ, ಅಮೃತ ಮುಕ್ತಿ ಧಾಮ ಹಾಗೂ ಅಮೃತ ಸಭಾಂಗಣದ ಉದ್ಘಾಟನೆ ಮಾ.25ರಂದು ನಡೆಯಲಿದೆ.

ಉದ್ಘಾಟನೆಯನ್ನು ಸಚಿವ ಎಸ್. ಅಂಗಾರ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಶ್ರೀಮತಿ ಹರಿಣಿ ಡಿ.ಡಿ., ಅಧ್ಯಕ್ಷರು ಅರಂತೋಡು ಗ್ರಾಮ ಪಂಚಾಯತ್, ಮುಖ್ಯ ಅತಿಥಿಗಳಾಗಿ ಎ. ವಿ. ತೀರ್ಥರಾಮ, ಅಧ್ಯಕ್ಷರು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ, ಡಾ| ಕುಮಾರ, ಭಾ.ಆ.ಸೇ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಭವಾನಿಶಂಕರ ಎನ್. ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತ್ ಸುಳ್ಯ, ಹೆಚ್. ಹನುಮಂತರಾಯಪ್ಪ, ಸ. ಕಾ. ಅಭಿಯಂತರರು, ಪಂ.ರಾ.ಇಂ.ಇಲಾಖೆ ಉಪವಿಭಾಗ ಸುಳ್ಯ, ಹರೀಶ್ ಕಂಜಿಪಿಲಿ, ಮಾಜಿ ಸದಸ್ಯರು ದ.ಕ. ಜಿಲ್ಲಾ ಪಂಚಾಯತ್, ಶ್ರೀಮತಿ ಪುಷ್ಪಾ ಮೇದಪ್ಪ, ಮಾಜಿ ಉಪಾಧ್ಯಾಕ್ಷರು ತಾಲೂಕು ಪಂಚಾಯತ್ ಸುಳ್ಯ, ಶ್ರೀಮತಿ ಲೀಲಾವತಿ ಕೋಡಂಕೇರಿ, ನಿಕಟ ಪೂರ್ವ ಅಧ್ಯಕ್ಷರು ಗ್ರಾಮ ಪಂಚಾಯತ್ ಅರಂತೋಡು, ಕೆ.ಆರ್. ಗಂಗಾಧರ, ವಿಶ್ರಾಂತ ಪ್ರಾಂಶುಪಾಲರು ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರು, ಸಂತೋಷ್ ಕುತ್ತಮೊಟ್ಟೆ, ಅಧ್ಯಕ್ಷರು ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಟಿ.ಎಂ. ಶಹೀದ್ ತೆಕ್ಕಿಲ್, ಅಧ್ಯಕ್ಷರು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಅರಂತೋಡು, ಕಿಶೋರ್ ಕುಮಾರ್ ಯು ಎಂ, ಅಧ್ಯಕ್ಷರು ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ತೊಡಿಕಾನ, ಕೆ.ಆರ್. ಪದ್ಮನಾಭ, ಅಧ್ಯಕ್ಷರು ಶ್ರೀ ಮಲ್ಲಿಕಾರ್ಜುನ ಭಜನಾ ಮಂಡಳಿ ಅರಂತೋಡು, ಸುಧೀರ್ ನೆಕ್ರಾಜೆ, ವಲಯ ಮೇಲ್ವಿಚಾರಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಪಾಜೆ ವಲಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.