ಪಾವಗಡದಲ್ಲಿ ಅಪಘಾತ : ಸುಳ್ಯ ಕೇರ್ಪಳದ ಯುವಕ ಮೃತ್ಯು

0


ತುಮಕೂರು ಜಿಲ್ಲೆಯ ಪಾವಗಡದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸುಳ್ಯ ಕೇರ್ಪಳದ ಪ್ರಜ್ವಲ್ ಎಂಬ ಯುವಕ ಮೃತಪಟ್ಟ ಘಟನೆ ವರದಿಯಾಗಿದೆ.
ಸುಳ್ಯದಲ್ಲಿ ರಿಕ್ಷಾ ಚಾಲಕರಾಗಿರುವ ರಮೇಶ್ ಎಂಬವರ ಪುತ್ರ ಪ್ರಜ್ವಲ್ ಪಾವಗಡದಲ್ಲಿ ಟೋಲ್‌ಸುಪರ್‌ವೈಸರ್ ಆಗಿ ಕೆಲಸದಲ್ಲಿದ್ದರು. ನಿನ್ನೆ ರಾತ್ರಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಪರಿಣಾಮ ತಲೆ ರಸ್ತೆಗೆ ಬಡಿಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ವಿಷಯ ತಿಳಿದು ಸುಳ್ಯದಿಂದ ಅವರ ಮನೆಯವರು ತುಮಕೂರಿಗೆ ತೆರಳಿದ್ದಾರೆ.