ಅಲೆಟ್ಟಿ : 6 ಮತ್ತು 7ನೇ ವಾರ್ಡಿನ ಕಾಂಗ್ರೆಸ್ ಕಾರ್ಯಕರ್ತರ ಸಭೆ

0

ಅಲೆಟ್ಟಿ ಗ್ರಾಮದ 6 ಮತ್ತು 7ನೇ ವಾರ್ಡಿನ ಕಾಂಗ್ರೆಸ್ ಕಾರ್ಯಕರ್ತರ ಸಭೆ ಗ್ರಾಮ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸತ್ಯಕುಮಾರ್ ಅಡಿಂಜರವರ ಅದ್ಯಕ್ಷತೆಯಲ್ಲಿ ಆರಂಬೂರು ಎಸ್ ಸಂಶುದ್ದೀನ್ ಇವರ ಮನೆಯಲ್ಲಿ ನಡೆಯಿತು. ಸಭೆಯಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯ ಸಿದ್ಧತೆಯ ಕುರಿತು ಚರ್ಚಿಸಲಾಯಿತು.

ಕಾಂಗ್ರೆಸ್ ಪಕ್ಷ ನೀಡಿದ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಅನ್ನು ಮನೆ ಮನೆ ತಲುಪಿಸುವ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಪಿ. ಸಿ. ಜಯರಾಮರವರು ಮಾತನಾಡಿ ನಮ್ಮ ಪಕ್ಷದ ಕಾರ್ಯಕರ್ತರು ಇಂದಿನಿಂದಲೇ ಪಕ್ಷದ ಗೆಲುವಿಗೆ ಶ್ರಮವಹಿಸಬೇಕು ಎಂದರು.

ಕಾಂಗ್ರೆಸ್ ನಾಯಕರಾದ ಸಂಶುದ್ದೀನ್ ರವರು ಮಾತನಾಡಿ ಈ ಬಾರಿ ಮನೆ ಮನೆಗೆ ತೆರಳಿ ಕಾಂಗ್ರೆಸ್ ಪಕ್ಷ ಈ ಹಿಂದೆ ಕೊಟ್ಟ ಕೊಡುಗೆಗಳು, ಮುಂದೆ ಕೊಡುವ ಭರವಸೆಗಳನ್ನು ಮತದಾರನಿಗೆ ಮನದಟ್ಟು ಆಗುವ ಹಾಗೆ ಪ್ರಚಾರ ಪಡಿಸಬೇಕು ಎಂದರು. ಕಾಂಗ್ರೆಸ್ ನಾಯಕರಾದ ಎಂ ವೆಂಕಪ್ಪ ಗೌಡರವರು ಮಾತನಾಡಿ ಈ ಬಾರಿ ನಮ್ಮ ಪಕ್ಷದ ಸರಕಾರ, ನಮ್ಮ ಸುಳ್ಯದ ಎಂಎಲ್ ಎ ಬಂದೆ ಬರುತ್ತದೆ ಎಲ್ಲರೂ ದೈರ್ಯದಿಂದ ಕೆಲಸವನ್ನು ಮಾಡೋಣ ಎಂದರು. ಸಭೆಯಲ್ಲಿ ನೂತನ ಗ್ರಾಮ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಆಯ್ಕೆ ಆದ ಸತ್ಯಕುಮಾರ್ ಅಡಿಂಜ, ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಕೊಯಿಂಗಾಜೆ, ಜತ್ತಪ್ಪ ರೈ ಇವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ್ ಅನ್ನು ಫಾಮಿದಾ ಸಂಶುದ್ದಿನ್ ಇವರಿಗೆ ನೀಡಲಾಯಿತು. ಸಭೆಯಲ್ಲಿ ಗೀತಾ ಕೋಲ್ಚಾರು, ಮುಸ್ತಫಾ ಸುಳ್ಯ, ಬಾಪೂಸಾಹೇಬ್ ಆರಂಬೂರು, ಅಮ್ಮು ರೈ, ಕುಕ್ಕಪ್ಪ ರೈ, ಜತ್ತಪ್ಪ ರೈ ಆರಂಬೂರು, ಮೀನಾಕ್ಷಿ ಆರಂಬೂರು, ಹೇಮಂತ್ ಆರಂಬೂರು, ಜಯಂತಿ ಕುಟೆಲು, ಕೃಷ್ಣ ನಾಯ್ಕ ಆರಂಬೂರು, ಗಣೇಶ್ ನಾಗಪಟ್ಟಣ, ಚಂದ್ರಶೇಖರ ಕೋಲ್ಚಾರು, ಬಶೀರ್ ಸ್ವಪ್ನ ಸುಳ್ಯ, ಫಾಹಿಮ್ ಆರಂಬೂರು, ಫೇಮಿಧಾ ಸಂಶುದ್ದೀನ್ ಆರಂಬೂರು, ಧರ್ಮಪಾಲ ಕೊಯಿಂಗಾಜೆ ಮೊದಲಾದವರು ಉಪಸ್ಥಿತರಿದ್ದರು.