ಐವರ್ನಾಡು ಗ್ರಾಮದ ಕುದುಂಗು ಮನೆಯಲ್ಲಿ ಶ್ರೀ ಶಿರಾಡಿ ದೈವ ,ರಕ್ತೇಶ್ವರಿ ಹಾಗೂ ಪರಿವಾರ ದೈವಗಳ ನೇಮೋತ್ಸವವು ಮಾ.19 ಮತ್ತು ಮಾ.20 ರಂದು ನಡೆಯಿತು.
ಮಾ.19 ರಂದು ಸಂಜೆ ದೈವಗಳ ಭಂಡಾರ ತೆಗೆಯಲಾಯಿತು.
ನಂತರ ಅನ್ನಸಂತರ್ಪಣೆ ನಡೆಯಿತು.
ಬಳಿಕ ರಕ್ತೇಶ್ವರಿ ,ಪಂಜುರ್ಲಿ ದೈವದ ಕೋಲೋತ್ಸವ ನಡೆಯಿತು.
ಮಾ.20 ರಂದು ಶ್ರೀ ಶಿರಾಡಿ,ಗುಳಿಗ ದೈವದ ಕೋಲೋತ್ಸವ ನಡೆಯಿತು.
ಬಳಿಕ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಗೌಡ ಕುದುಂಗು,ವೀರಪ್ಪ ಗೌಡ ಜಬಳೆ ಹಾಗೂ ಕುಟುಂಬಸ್ಥರು ಮತ್ತು ನೂರಾರು ಜನ ಭಕ್ತಾದಿಗಳು ಉಪಸ್ಥಿತರಿದ್ದರು.