ಐದು ವರ್ಷಗಳ ಹಿಂದೆ ಗುದ್ದಲಿ ಪೂಜೆ, ಸೇತುವೆ ಕನಸ್ಸು ಭಗ್ನ

0

ಕಲ್ಮಕಾರಿನ ಹೊಸಕಲ್ಲು ಬಾಳೆಬೈಲು ರಸ್ತೆ ಫಲಾನುಭವಿಗಳಿಂದ ಮತದಾನ ಬಹಿಷ್ಕಾರ

ಕಲ್ಮಕಾರು ಗ್ರಾಮದ ಹೊಸಕಲ್ಲು ಬಾಳೆಬೈಲು ರಸ್ತೆ ಫಲಾನುಭವಿಗಳಿಂದ ಸೇತುವೆ ಬೇಡಿಕೆ ಮುಂದಿರಿಸಿ ಮತದಾನ ಬಹಿಷ್ಕಾರ ಮಾಡಲು ನಿರ್ಧರಿಸಿದ್ದಾರೆ. ಈ ಬಗ್ಗೆ ಮುಖ್ಯರಸ್ತೆ ಬಳಿ ಬ್ಯಾನರ್ ಅಳವಡಿಸಲಾಗಿದೆ. ಐದು ವರ್ಷಗಳ ಹಿಂದೆ ಹೊಸಕಲ್ಲು ಎಂಬಲ್ಲಿ 25 ಲಕ್ಷ ಅನುದಾನದಲ್ಲಿ‌ನದಿಗೆ ಸೇತುವೆ ನಿರ್ಮಾಣ ಮಾಡುವುದಾಗಿ ಶಾಸಕ ಎಸ್ ಅಂಗಾರ ಅವರು ಗುದ್ದಲಿ ಪೂಜೆ ನೆರವೇರಿಸಿದ್ದರು. ಆದರೆ ಸೇತುವೆ ಆಗಿಲ್ಲ. ಸೇತುವೆ ಕನಸ್ಸು ಭಗ್ನವಾಗಿದ್ದು, ರೋಸಿ ಹೋಗಿರುವ ಫಲಾನುಭವಿಗಳು ಮತದಾನ ಬಹಿಷ್ಕಾರ ನಿರ್ಧಾರ ಕೈಗೊಂಡಿದ್ದಾರೆ