ಕನಕಮಜಲು: ಬಾಳೆಹಿತ್ತಿಲು ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ ಪ್ರಾರಂಭ

0

ದೈವಗಳಿಗೆ ತಂಬಿಲ ಸೇವೆ – ಪೊಟ್ಟನ್, ಕೊರತಿ, ಪಡಿಂಞಾರು ಚಾಮುಂಡಿ ಹಾಗೂ ಶ್ರೀ ವಿಷ್ಣುಮೂರ್ತಿ ದೈವದ ಕೋಲ

ಕನಕಮಜಲು ಗ್ರಾಮದ ಬಾಳೆಹಿತ್ತಿಲು ಶ್ರೀ ವಯನಾಟ್ ಕುಲವನ್ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವವು ಮಾ. 22ರಿಂದ ಮಾ. 26ರವರೆಗೆ ಜರುಗಲಿದ್ದು, ಮಾ.22ರಂದು ದೈವಂಕಟ್ಟು ಮಹೋತ್ಸವವು ಪ್ರಾರಂಭಗೊಂಡಿದೆ.


ಮಾ.22ರಂದು ಬೆಳಿಗ್ಗೆ ದೈವದ ಸನ್ನಿಧಿಯಲ್ಲಿ ರಕ್ತೇಶ್ವರಿ, ನಾಗ, ಗುಳಿಗ, ಬ್ರಹ್ಮರಾಕ್ಷಸು ತಂಬಿಲ ಜರುಗಿತು. ರಾತ್ರಿ ವಿಷ್ಣುಮೂರ್ತಿ ದೈವದ ತೊಡಂಙಲ್, ಪೊಟ್ಟನ್, ಕೊರತಿ ದೈವಗಳ ಕೋಲ ನಡೆದು ಪ್ರಸಾದ ವಿತರಣೆಯಾಯಿತು.


ಮಾ.23ರಂದು ಬೆಳಿಗ್ಗೆ ಪಡಿಂಞಾರು ಚಾಮುಂಡಿ ದೈವದ ಕೋಲ, ಶ್ರೀ ವಿಷ್ಣುಮೂರ್ತಿ ದೈವದ ಕೋಲ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ವಯನಾಟ್ ಕುಲವನ್ ಶ್ರೀ ವಿಷ್ಣುಮೂರ್ತಿ ಆಡಳಿತ ಸಮಿತಿಯ ಪದಾಧಿಕಾರಿಗಳು, ದೈವಂಕಟ್ಟು ಮಹೋತ್ಸವ ಸಮಿತಿಯ ಪದಾಧಿಕಾರಿಗಳು, ದೈವಂಕಟ್ಟು ಮಹೋತ್ಸವದ ವಿವಿಧ ಉಪಸಮಿತಿಯ ಸಂಚಾಲಕರುಗಳು, ಸಹ ಸಂಚಾಲಕರುಗಳು, ಸದಸ್ಯರುಗಳು, ವಿವಿಧ ಬೈಲುವಾರು ಸಮಿತಿಯ ಪದಾಧಿಕಾರಿಗಳುವ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.