ಕಲ್ಮಕಾರು – ಮೆಂಟೆಕಜೆ – ಪಡ್ಪು ಕಾಂಕ್ರಿಟೀಕರಣ ರಸ್ತೆ ಸಚಿವ ಎಸ್.ಅಂಗಾರರಿಂದ ಉದ್ಘಾಟನೆ

0

ಕಲ್ಮಕಾರು ಗ್ರಾಮದ ಕಲ್ಮಕಾರು-ಮೆಂಟೆಕಜೆ-ಪಡ್ಪು ರಸ್ತೆಯ ಸುಮಾರು ರೂ.80.00 ಲಕ್ಷ ಅನುದಾನದಲ್ಲಿ ನಡೆದ ಕಾಂಕ್ರೀಟ್ ರಸ್ತೆಯ ಕಾಮಗಾರಿಯನ್ನು ಸಚಿವರಾದ ಎಸ್. ಅಂಗಾರರವರು ಮಾ.24 ರಂದು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸುಳ್ಯ ಬಿ.ಜೆ.ಪಿ ಮಂಡಲ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ದ.ಕ. ಜಿಲ್ಲಾ ಬಿ.ಜೆ.ಪಿ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಜಿಲ್ಲಾ ಬಿ.ಜೆ.ಪಿ ಪ್ರಧಾನ ಕಾರ್ಯದರ್ಶಿ ಕೇಶವ ಭಟ್ ಮುಳಿಯ,ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ ಹಾಗೂ ಗ್ರಾ.ಪಂ ಸದಸ್ಯರಾದ ಅಶ್ವಥ್ ಯಲದಾಳು,ಪುಷ್ಪರಾಜ್ ಪಡ್ಪು, ಪಕ್ಷದ ಪ್ರಮುಖರಾದ ಡ್ಯಾನಿ ಯಲದಾಳು,ಉದಯ ಶಿವಾಲ ಹಾಗೂ ಊರಿನ ಹಿರಿಯರು,ಫಲಾನುಭವಿಗಳು ಉಪಸ್ಥಿತರಿದ್ದರು.