ಬಜನಿ – ದೋಳ್ತೋಡಿ ರಸ್ತೆ ಉದ್ಘಾಟನೆ, ಶ್ರೀನಾಥ್ ರೈಯವರಿಗೆ ಸನ್ಮಾನ

0

ಸುಮಾರು 42 ಲಕ್ಷ ಅನುದಾನದಲ್ಲಿ ಕಾಂಕ್ರೀಟೀಕರಣಗೊಂಡ ಬಜನಿ – ದೋಳ್ತೋಡಿ ರಸ್ತೆಯ ಉದ್ಘಾಟನೆ ಮಾ. 25ರಂದು ನಡೆಯಿತು.
ಸ್ಥಳೀಯ ಬಿಜೆಪಿ ಮುಖಂಡ ಶ್ರೀನಾಥ್ ರೈ ದೋಳ್ತೋಡಿ ರಸ್ತೆ ಉದ್ಘಾಟಿಸಿದರು.

ಅನುದಾನಕ್ಕೆ ಶ್ರಮವಹಿಸಿದ ಶ್ರೀನಾಥ್ ರೈಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಬಾಳಿಲ ಗ್ರಾ.ಪಂ. ಸದಸ್ಯ ರಮೇಶ್ ರೈ ಅಗಲ್ಪಾಡಿ, ಸ್ಥಳೀಯರಾದ ಪದ್ಮನಾಭ ರೈ ಬಜನಿ, ಭಾಸ್ಕರ ಶೆಟ್ಟಿ, ಪ್ರಭಾಕರ ಆಳ್ವ, ಕೃಷ್ಣ ರೈ, ಅಶೋಕ್ ಕುಮಾರ್ ರೈ, ಗೋಪಾಲಕೃಷ್ಣ ರೈ, ಮಹಾಲಿಂಗ ಗೌಡ, ರಾಮಣ್ಣ ಗೌಡ, ಚಂದ್ರಶೇಖರ, ಸುಧಾಕರ ರೈ, ನಮಿತಾ ಆಳ್ವ, ಚಿನ್ಮಯ್, ಸಾತ್ವಿಕ್ ಆರ್. ಅಂಚನ್, ಗುತ್ತಿಗೆದಾರರಾದ ಕರುಣಾಕರ ರೈ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.