ಗುತ್ತಿಗಾರು : ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಹಾಯ ನಿಧಿ ಕೂಪನ್ ಡ್ರಾ

0

ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರು ವತಿಯಿಂದ ಆಯೋಜನೆ ಮಾಡಿದ ಸಹಾಯ ನಿಧಿ ಕೂಪನ್ ಇಂದು ಮಾ. 26 ರಂದು ನಡೆಯಿತು. ವಿಜೇತರನ್ನು ಪುಟಾಣಿ ಅಧಿಕ್ಷ ಕುಲ್ಲಚೆಟ್ಟಿ ಮತ್ತು ಪುಟಾಣಿ ಮಯೂರ್ ಗುಡ್ಡೆಮನೆ ಆಯ್ಕೆ ಮಾಡಿದರು.

ಈ ಸಂದರ್ಭದಲ್ಲಿ ರಾಷ್ಟ್ರಿಯ ಕ್ರೀಡಾಪಟು ಗುತ್ತಿಗಾರ್ ಗ್ರಾ. ಪಂಚಾಯತ್ ಸದಸ್ಯ, ಮಾಯಿಲಪ್ಪ ಕೊಂಬೆಟ್ಟು, ಪಂಚಾಯತ್ ಸದಸ್ಯ ಜಗದೀಶ್ ಬಾಕಿಲ, ಭಾರತೀಯ ಭೂ ಸೇನಾ ಸೈನಿಕ ಸುಜನ್ ಗುಡ್ಡೆಮನೆ,ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪರಶುರಾಮ್ ಚಿಲ್ತಡ್ಕ,ನಿವೃತ್ತ ಯೋಧ ಮಹೇಶ್ ಕೊಪ್ಪತಡ್ಕ,ಶ್ರೀ ಕ್ಷೇತ್ರ. ಧ. ಗ್ರಾ. ಅ. ಯೋ. ಮೇಲ್ವಿಚಾರಕರು ಆದ ಬಾಲಕೃಷ್ಣ ಗೌಡ,ಅಮರ ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ದಿವ್ಯ ಸುಜನ್ ಗುಡ್ಡೆಮನೆ,ಮೋಹನ್ ಮುಕ್ಕೂರ್, ಸುನಿಲ್ ಅಮೆ ಮನೆ, ರಾಜೇಶ್ ಉತ್ರಂಬೆ,ಶೋಭಿತ ಅರುಣ್ ಕುಲ್ಲಚೆಟ್ಟಿ,ಗಿರಿಪ್ರಸಾದ್ ಪಾರೆಪ್ಪಾಡಿ, ಟ್ರಸ್ಟ್ ಕೋಶಾಧಿಕಾರಿ ಸುಕುಮಾರ್ ಕೋಡೊಂಬು, ಪ್ರಧಾನ ಕಾರ್ಯದರ್ಶಿ ಯತೀಂದ್ರ ಕಟ್ಟೆಕೋಡಿ, ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ ಮತ್ತು ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು