ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಸದಸ್ಯರಿಂದ ಎಣ್ಮೂರಲ್ಲಿ ಶ್ರಮದಾನ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿಂತಿಕಲ್ಲು ವಲಯದ ಒಕ್ಕೂಟದ ಸದಸ್ಯರು ಮತ್ತು ನಿಂತಿಕಲ್ಲು, ಪಂಜ, ಕಲ್ಮಡ್ಕ ವಿಪತ್ತು ಘಟಕದ ಸದಸ್ಯರ ಮೂಲಕ ಮಾ. 26ರಂದು ಎಣ್ಮೂರಲ್ಲಿ ಶ್ರಮದಾನ ನಡೆಯಿತು.


ಎಣ್ಮೂರು ಗರಡಿಯಲ್ಲಿ ಏ. ತಿಂಗಳಲ್ಲಿ ನಡೆಯಲಿರುವ
ನೇಮೋತ್ಸವದ ಪ್ರಯುಕ್ತ ಈ ಶ್ರಮದಾನ ನಡೆಸಲಾಯಿತು. ಈ ಸಂದರ್ಭದಲ್ಲಿ ಗರಡಿಯ ಆಡಳಿತ ಮಂಡಳಿಯ ಸದಸ್ಯರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ.ಯ ವಲಯ ಮೇಲ್ವಿಚಾರಕಿ ಉಷಾ ಕಲ್ಯಾಣಿ, ವಿಪತ್ತು ನಿರ್ವಹಣಾ ಘಟಕ ನಿಂತಿಕಲ್ಲು ವಲಯದ ಸೇವಾಪ್ರತಿನಿಧಿ ರತ್ನಾವತಿ, ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ ದಿನೇಶ್, ವಿಶ್ವನಾಥ್, ಜಯಪ್ರಕಾಶ್ ಉಪಸ್ಥಿತರಿದ್ದರು.