
ಕನಕಮಜಲು ಗ್ರಾಮದ ಬಾಳೆಹಿತ್ತಿಲು ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವಕ್ಕೆ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಮಾ.26ರಂದು ಭೇಟಿ ನೀಡಿದರು.
ಅಪರಾಹ್ನ ದೈವಸ್ಥಾನಕ್ಕೆ ಭೇಟಿ ನೀಡಿದ ಅವರು ದೈವಸ್ಥಾನದ ಪಕ್ಕದಲ್ಲಿರುವ ಉಗ್ರಾಣವನ್ನು ವೀಕ್ಷಿಸಿದರಲ್ಲದೇ, , ಶ್ರೀ ಕಂಡನಾರ್ ಕೇಳನ್ ದೈವದ ನರ್ತನ ಸೇವೆ ವೀಕ್ಷಿಸಿ, ದೈವದ ಅನ್ನಪ್ರಸಾದ ಸ್ವೀಕರಿಸಿದರು.