ಉಜಂಪಾಡಿ-ಮಣಿಯೂರು ಶ್ರೀ ಶಾಸ್ತಾರ ದೇವರ ನೂತನ ಗರ್ಭಗುಡಿಯ ಗರ್ಭನ್ಯಾಸ

0

ಉಜಂಪಾಡಿ ಮಣಿಯೂರು ಶ್ರೀ ಶಾಸ್ತಾರ ಕ್ಷೇತ್ರದ ಜೀರ್ಣೋದ್ಧಾರದ ಭಾಗವಾಗಿ ನೂತನವಾಗಿ ನಿರ್ಮಿಸಲ್ಪಟ್ಟ ಗರ್ಭಗುಡಿಯ ಗರ್ಭನ್ಯಾಸ ಕಾರ್ಯಕ್ರಮವನ್ನು ಇತ್ತೀಚೆಗೆ ವೇದಮೂರ್ತಿ ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ನೆರವೇರಿಸಿದರು.

ಬ್ರಹ್ಮಶ್ರೀ ರವೀಶ ತಂತ್ರಿಯವರ ಮಾರ್ಗದರ್ಶನದಂತೆ ವಿನಯ ಕುಂಟಾರು, ರೂಪೇಶ, ಶ್ರೀವಿಷ್ಣುಮೂರ್ತಿ, ಮನ್ವಿತ್, ವಿಜಯ, ಆದಿತ್ಯ, ಅರುಣ ಭಟ್, ಮಂಜುನಾಥ ಉಡುಪ ಮೊದಲಾದ ತಾಂತ್ರಿಕ ಸದನದ ಪುರೋಹಿತರಿಂದ ಶ್ರೀ ಗಣಹೋಮ, ದೇವತಾ ಪ್ರಾರ್ಥನೆ, ಶ್ರೀ ವಿಷ್ಣು ಪೂಜಾ ಪುರಸ್ವರ- ಕೇಶವಾದಿ ದ್ವಾದಶ ಮೂರ್ತಿ ಆರಾಧನೆ- ಪವಮಾನ ಹೋಮ, ಶ್ರೀ ಶಾಸ್ತಾರ ದೇವರ ಕಲ್ಪೋಕ್ತ ಪೂe, ಮೃತ್ಯುಂಜಯ ಹೋಮ ನಡೆಸಲ್ಪಟ್ಟು ಮಂಗಲೋತ್ಸವ ನೆರವೇರಿತು.

ದೇವತಾ ಪ್ರಾರ್ಥನೆಯೊಂದಿಗೆ ಆರಂಭವಾಗಿ ಮಂಗಲೋತ್ಸವದವರೆಗೆ ಕ್ಷೇತ್ರದ ಪವಿತ್ರಪಾಣಿ ಮುಗೇರು ಗೋಪಾಲ ರಾವ್, ಆಡಳಿತ ಮೊಕ್ತೇಸರ ಅರಿಯಡ್ಕ ಚಿಕ್ಕಪ್ಪ ನಾಕ್, ಮೊಕ್ತೇಸರ ಎ. ನಾರಾಯಣ ನಾಕ್, ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಯಂ. ಗೋಪಾಲಕೃಷ್ಣ ಕುಂಜತ್ತಾಯ, ಪ್ರಧಾನ ಕಾರ್ಯದರ್ಶಿ ಕೋಟಿಗದ್ದೆ ಗೋಪಾಲಯ್ಯ, ತ್ರಿವಿಕ್ರಮ ಮನೋಳಿತ್ತಾಯ ಮಣಿಯೂರು, ಶಾಂತಿಮಲೆ ಜಗನ್ನಾಥ ರೈ, ಉಜಂಪಾಡಿ ವಿಶ್ವನಾಥ ರೈ ಮೊದಲಾದ ಪ್ರಮುಖರು ಉಪಸ್ಥಿತರಿದ್ದು, ಸಹಕಾರ ನೀಡಿದರು.

ಆರಂಭದಲ್ಲಿ ಕ್ಷೇತ್ರ ಜೀರ್ಣೋದ್ಧಾರ ಸಮಿತಿಯ ಕಾರ್‍ಯಾಧ್ಯಕ್ಷ ಬೆಳ್ಳಿಪ್ಪಾಡಿ ಸದಾಶಿವ ರೈ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ವೆಂಕಟ್ರಮಣ ಭಟ್ ಮಾಸ್ತರ್ ದೇಲಂಪಾಡಿ ವಂದಿಸಿದರು.