ಸುಳ್ಯದ ಹೊಸಗದ್ದೆ ಶ್ರೀ ದುರ್ಗಾಶಕ್ತಿ ಸೇವಾ ಬಳಗದ ವತಿಯಿಂದ ಸಮಿತಿಯ ಸದಸ್ಯರಾದ ಜನಾರ್ಧನ ಅವರ ಮಗಳು ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ 8 ಚಿನ್ನದ ಪದಕ ಪಡೆದ ಕು.ಕೃತಿ ಹೊಸಗದ್ದೆ ಇವರನ್ನು ಸನ್ಮಾನಿಸಲಾಯಿತು.
ಸೇವಾ ಬಳಗದ ಅಧ್ಯಕ್ಷರಾದ ಕೇಶವ ಸಿ.ಎ ಹೊಸಗದ್ದೆ ಮತ್ತು ಉದ್ಯಮಿ ಕಸ್ತೂರಿಶಂಕರ್ ಹಾಗೂ ಕುಸುಮಾಧರ ಕೆ.ಜೆ ಅವರು ಸನ್ಮಾನಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಸಮಿತಿಯ ಎಲ್ಲಾ ಪದಾಧಿಕಾರಿಗಳು ಸದಸ್ಯರುಗಳು ಹಾಜರಿದ್ದರು.