ಮೇ.06 : ರಂಗಮನೆಯಲ್ಲಿ ಸುಗಮ ಸಂಗೀತ ಕಾರ್ಯಾಗಾರ

0

ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ ಸಂಗಮ ಕಲಾಕ್ಷೇತ್ರ ಟ್ರಸ್ಟ್ (ರಿ) ಬೆಂಗಳೂರು ಹಾಗೂ ಗಣೇಶ್ ಮ್ಯೂಸಿಕಲ್ಸ್ ಸುಳ್ಯ ಆಶ್ರಯದಲ್ಲಿ ಮೇ 06 ರಂದು ಖ್ಯಾತ ಚಲನಚಿತ್ರ ಗಾಯಕ, ರಾಜ್ಯ ಪ್ರಶಸ್ತಿ ವಿಜೇತರಾದ ರಮೇಶ್ ಚಂದ್ರ ಬೆಂಗಳೂರು ಇವರಿಂದ ಒಂದು ದಿನದ  ಸುಗಮ ಸಂಗೀತದ ಕಾರ್ಯಗಾರವನ್ನು ಏರ್ಪಡಿಸಲಾಗಿದೆ.

ಕನ್ನಡದ ಪ್ರಸಿದ್ಧ ಸಾಹಿತಿಗಳ ಅನೇಕ ಹಾಡುಗಳನ್ನು ಕಲಿಸುವುದರ ಜೊತೆಗೆ ರಾಗ ತಾಳ ಲಯ ಭಾವದ ಬಗ್ಗೆ ರಮೇಶ್ಚಂದ್ರರು ತಿಳಿಸಿಕೊಡಲಿದ್ದಾರೆ. ಪೂ.9.30 ರಿಂದ ಸಂಜೆ 5.00 ರವರೆಗೆ ನಡೆಯಲಿರುವ ಈ ಕಾರ್ಯಾಗಾರದಲ್ಲಿ ಸೀಮಿತ ಮಂದಿಗೆ ಮಾತ್ರ ಅವಕಾಶವಿದ್ದು ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ .

ಶಿಬಿರದ ಶುಲ್ಕ ರೂ: 500 (ಊಟ ಲಘು ಉಪಹಾರ ಸೇರಿ)ಆಗಿದ್ದು ಮೊದಲು ಹೆಸರು  ನೋಂದಾಯಿಸಿಕೊಂಡವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಆಸಕ್ತರು ಎಪ್ರಿಲ್ 30 ರೊಳಗೆ ಈ ಕೆಳಗಿನ ನಂಬರಿಗೆ ಕರೆ ಮಾಡಿ  ಹೆಸರು ನೋಂದಾಯಿಸಿಕೊಳ್ಳಬೇಕೆಂದು ಕಾರ್ಯಾಗಾರದ ಸಂಚಾಲಕರಾದ ಗಣೇಶ್ ಬಿ.ಎಸ್.( 9845639263, 7019203226) ತಿಳಿಸಿದ್ದಾರೆ.