ವಿಶ್ವನಾಥ ಮಾನಾಡು ನೇಣುಬಿಗಿದು ಆತ್ಮಹತ್ಯೆ

0

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನೌಕರ, ಮೋನಪ್ಪ ಮಾನಾಡು ಅವರ ಸಹೋದರ ವಿಶ್ವನಾಥ ಮಾನಾಡು ರವರು ಎ.28 ರಂದು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಪ ಕಾಲದ ಅಸೌಖ್ಯತೆಯಿಂದ ಬಳಲುತಿದ್ದರೆನ್ನಲಾಗಿದೆ. ಅವರಿಗೆ 44 ವರ್ಷ ವಯಸ್ಸಾಗಿತ್ತು.

ಮೃತರು ತಾಯಿ ಮೊಂಟಿ, ಇಬ್ಬರು ಸಹೋದರರು, ಮೂವರು ಸಹೋದರಿಯರು ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.