ನಿಡ್ವಾಳ ದೇವಳದ ನೂತನ ಗರ್ಭಗುಡಿ ನಿರ್ಮಾಣಕ್ಕೆ ಶಿಲಾಕಲ್ಲು ಆಗಮನ

0

ನಿಂತಿಕಲ್ಲಿನಿಂದ ಬೃಹತ್ ಮೆರವಣಿಗೆ


(ನಾಳೆ)ಮೇ.12 ರಂದು ಪಾದುಕಾನ್ಯಾಸ

ಐವತ್ತೊಕ್ಲು ಗ್ರಾಮದ ಕರಿಕ್ಕಳ ಶ್ರೀ ಮಹಾವಿಷ್ಣು ದೇವಸ್ಥಾನದ ಪುನರ್ ನಿರ್ಮಾಣ ಕಾರ್ಯ ನಡೆಯುತ್ತಿದ್ದು
ಆ ಪ್ರಯುಕ್ತ ನೂತನ ಗರ್ಭಗುಡಿ
ನಿರ್ಮಾಣಕ್ಕೆ ಶಿಲಾಕಲ್ಲು ಆಗಮನದ ಮೆರವಣಿಗೆಯು ಮೇ.11 ರಂದು ವಿಜೃಂಭಣೆಯಿಂದ ನಡೆಯಿತು. ಮೇ.12 ರಂದು ಪಾದುಕಾನ್ಯಾಸ ನಡೆಯಲಿದೆ.
ಮೇ.11 ರಂದು ನಿಂತಿಕಲ್ಲಿನಿಂದ ನಿಡ್ವಾಳದ ವರೆಗೆ ಬೃಹತ್ ವಾಹನ ಮೆರವಣಿಗೆಯೊಂದಿಗೆ ನೂತನ ಗರ್ಭಗುಡಿಗೆ ಶಿಲಾಕಲ್ಲು ಆಗಮನ ನಡೆಯಿತು.

ಉದ್ಯಮಿ ದಿವಾಕರ ಪಂಬೆತ್ತಾಡಿ,ಡಾ.ರವಿ ಕಕ್ಕೆಪದವು, ಭಾಗೀರಥಿ ಮುರುಳ್ಯ ತೆಂಗಿನ ಕಾಯಿ ಒಡೆದು ನಿಂತಿಕಲ್ಲಿನಲ್ಲಿ ಮೆರವಣಿಗೆಗೆ
ಚಾಲನೆ ನೀಡಿದರು.ಮೆರವಣಿಗೆಯಲ್ಲಿ ಕುಣಿತ ಭಜನೆ ತಂಡ, ಚೆಂಡೆ, ನೂರಾರು ವಾಹನಗಳು ಸಾಗಿ ಮೆರುಗು ನೀಡಿತು.

ನಿಡ್ವಾಳ ದೇವಳದ ಸಮೀಪದಲ್ಲಿ ಶಿಲಾಕಲ್ಲು ಆಗಮನಕ್ಕೆ ಪೂರ್ಣಕುಂಭದ ಸ್ವಾಗತ ನಡೆಯಿತು.
ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಪ್ರಕಾಶ್ ಕಂಬಳ, ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ನೇಮಿರಾಜ ಪಲ್ಲೋಡಿ, ಆಡಳಿತ ಮಂಡಳಿ ಸರ್ವ ಸದಸ್ಯರು,ಪುನರ್ ನಿರ್ಮಾಣ ಸಮಿತಿ ಸರ್ವ ಸದಸ್ಯರು,ವಿವಿಧ ಸಮಿತಿಗಳ ಪದಾಧಿಕಾರಿಗಳು,ಸದಸ್ಯರು, ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು. ಗುರುಪ್ರಸಾದ್ ತೋಟ ನಿರೂಪಿಸಿದರು ಮತ್ತು ವಂದಿಸಿದರು.


ಮೇ.12ರಂದು ಬೆಳಿಗ್ಗೆ 9.28ರ ಮಿಥುನ ಲಗ್ನದ ಶುಭ ಮುಹೂರ್ತದಲ್ಲಿ ಬ್ರಹ್ಮ ಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಪಾದುಕಾನ್ಯಾಸ ನಡೆಯಲಿದೆ.
ಶ್ರೀ ದೇವಳದಲ್ಲಿ ನಡೆದ
ಅಷ್ಟಮಂಗಲ ಪ್ರಶ್ನೆ ಚಿಂತನೆಯಲ್ಲಿ ಕಂಡು ಬಂದಂತೆ ಶ್ರೀ ದೇವರ ಪುನರ್ ನಿರ್ಮಾಣ ಕಾರ್ಯ ಆರಂಭ ಗೊಂಡಿದೆ.


ದೋಷಗಳ ಪರಿಹಾರ,ಶ್ರೀ ದೇವರಿಗೆ ಅನುಜ್ಞಾ ಕಲಶ, ಶ್ರೀ ದೇವರ ಬಾಲಾಲಯ ಪ್ರತಿಷ್ಠೆ, ನಾಗ ಶಿಲಾ ಪ್ರತಿಷ್ಠಾ ಕಲಶ ಮೊದಲಾದ ವೈಧಿಕ ,ಧಾರ್ಮಿಕ ಕಾರ್ಯಕ್ರಮಗಳು ನಡೆದಿದೆ.ಶ್ರೀ ದೇವಳವು ಸುಮಾರು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಪುನರ್ ನಿರ್ಮಾಣ ಕಾರ್ಯ ನಡೆಯಲಿದ್ದು ಭಕ್ತಾದಿಗಳ ತನು ಮನ ಧನ ಸಹಕಾರದಿಂದ
ಪೂರ್ಣ ಗೊಳ್ಳಲಿದೆ.