ಇಷ್ಟಾರ್ಥ ಸಿದ್ಧಿಗಾಗಿ ಬೈರಜ್ಜಿಗೆ ಹರಕೆ ಸಮರ್ಪಿಸಿದ ಸಾವಿರಾರು ಭಕ್ತರು

ಗುತ್ತಿಗಾರು ಗ್ರಾಮದ ಕಮಿಲ ಇತಿಹಾಸ ಪ್ರಸಿದ್ಧ ಮೊಗ್ರ ಶ್ರೀ ಕನ್ನಡ ದೇವತೆಯಾನೆ ಪುರುಷ ದೈವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವ ಭಕ್ತಿ ಸಂಭ್ರಮದಿಂದ ನಡೆಯಿತು.
ಜ. 19 ರಂದು ಮಧ್ಯಾಹ್ನ ಮೊಗ್ರ ದೊಡ್ಡಮನೆಯಲ್ಲಿ ಶ್ರೀ ದೇವರಿಗೆ ಸಮಾರಾಧನೆ ನಡೆಯಿತು. ರಾತ್ರಿ ಮಲ್ಕಜೆ ಮಾಳಿಗೆಯಿಂದ ಭಂಡಾರ ಬಂದು ಜ. 20 ರಂದು ಬೆಳಿಗ್ಗೆ ಶ್ರೀ ಉಳ್ಳಾಕುಲು ನೇಮ, ನಂತರ
ಶ್ರೀ ಕುಮಾರ ನೇಮ ನಡೆಯಿತು.

ಸಂಜೆ ಉಳ್ಳಾಕುಲು ಭಂಡಾರ ಹೊರಟು, ಶ್ರೀ ಪುರುಷ ದೈವದ ನೇಮ, ರಾತ್ರಿ ಶ್ರೀ ರುದ್ರಚಾಮುಂಡಿ ನೇಮ,
ಶ್ರೀ ಮಲೆಚಾಮುಂಡಿ ನೇಮ ನಡೆಯಿತು.















ಜ. 21ರಂದು ಬೆಳಿಗ್ಗೆ ಇತಿಹಾಸ ಪ್ರಸಿದ್ಧ ಶ್ರೀ ಭೈರಜ್ಜಿ ನೇಮ ನಡೆಯಿತು. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಬೈರಜ್ಜಿಯ ಪ್ರಸಾದ ಸ್ವೀಕರಿಸಿದರು.
ಪ್ರಮುಖರಾದ ಎಂ. ಎನ್ ವೆಂಕಟ್ರಮಣ ಮೊಗ್ರ, ಕಾರ್ಯಪ್ಪ ಗೌಡ ಚಿಕ್ಮುಳಿ,ಚೆನ್ನಕೇಶವ ಗೌಡ ಕಮಿಲ, ಉಮೇಶ್ ಗೌಡ ಮಕ್ಕಿ, ಕೇಶವ ಗೌಡ ಬಳ್ಳಕ್ಕ, ದೊಡ್ಡಣ್ಣ ಗೌಡ ಚಿಕ್ಮುಳಿ, ಸೀತಾರಾಮ ಗೌಡ ಚಿಕ್ಮುಳಿ, ರಾಮಕೃಷ್ಣ ಗೌಡ ಚಿಕ್ಮುಳಿ, ಆಡಳಿತ ಮಂಡಳಿ ಸದಸ್ಯರು, ಹಾಗೂ ಮೊಗ್ರ 24 ವಕ್ಕಲಿಗೆ ಒಳಪಟ್ಟ ಊರ ಹತ್ತು ಸಮಸ್ತರು
ಉಪಸ್ಥಿತರಿದ್ದರು.

ಜ.23 ರಂದು ಬೆಳಿಗ್ಗೆ ನಡಾವಳಿ ಸ್ಥಾನದಿಂದ ಮೂವ ಮಾಳಿಗೆಗೆ ಭಂಡಾರ ಹೊರಟು ರಾತ್ರಿ ಮೂವ ಮಾಳಿಗೆಯಿಂದ ರಾಜಾಂಗಣಕ್ಕೆ ಭಂಡಾರ ಹೊರಡಲಿದೆ.
ಜ.24 ರಂದು ಬೆಳಿಗ್ಗೆ ಬ್ರಹ್ಮರ ನೇಮ, ರಾಜ್ಯನ್ ದೈವ ಮತ್ತು ಉಪದೈವಗಳ ನೇಮ ನಡೆಯಲಿದೆ.









