ರಂಗಮನೆಯಲ್ಲಿ ‘ಆಳ್ವಾಸ್ ರಂಗೋತ್ಸವಕ್ಕೆ ಚಾಲನೆ

0

ಚಿತ್ರನಟ ಮಂಡ್ಯ ರಮೇಶ್ ರವರಿಂದ ಉದ್ಘಾಟನೆ

ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ( ರಿ.) ಸುಳ್ಯ ಇದರ ಆಶ್ರಯದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಮೂಡುಬಿದಿರೆ ಅಭಿನಯಿಸಿದ, ರಂಗಮಾಂತ್ರಿಕ ಡಾ| ಜೀವನ್ ರಾಂ ಸುಳ್ಯ ನಿರ್ದೇಶನದ ಎರಡು ಪ್ರಸಿದ್ಧ ನಾಟಕಗಳ ” ಆಳ್ವಾಸ್ ರಂಗೋತ್ಸವ” ಕ್ಕೆ ಫೆಬ್ರವರಿ 1ರಂದು ಸಂಜೆ ಚಾಲನೆ ದೊರೆತಿದೆ.

ರಂಗಕಲಾವಿದ, ಚಿತ್ರನಟ ಮಂಡ್ಯ ರಮೇಶ್ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪಿ.ಬಿ ಸುಧಾಕರ ರೈ, ಸಿಎ ಗಣೇಶ್ ಭಟ್, ಲತಾ ಮಧುಸೂದನ್, ರವೀಶ್ ಪಡ್ಡoಬೈಲು, ಕೃಷ್ಣಮೂರ್ತಿ ಉಪಸ್ಥಿತರಿದ್ದರು.

ನೀನಾಸಂ ಕಲಾವಿದೆ ಮಮತಾ ಕಲ್ಮಕಾರ್ ಪ್ರಾರ್ಥಿಸಿದರು.ಜೀವನ್ ರಾಮ್ ಸುಳ್ಯ ಸ್ವಾಗತಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಮಕ್ಕಳ ರಂಗಭೂಮಿಯಲ್ಲೇ ವಿಭಿನ್ನ ಪ್ರಯೋಗವೆನಿಸಿದ, ಶ್ರೀಮತಿ ವೈದೇಹಿ ರಚಿಸಿದ ‘ನಾಯಿಮರಿ ನಾಟಕ’ ಪ್ರದರ್ಶನಗೊಂಡಿತು.ಈ ನಾಟಕ ಈಗಾಗಲೇ ರಾಜ್ಯದಾದ್ಯಂತ ಪ್ರದರ್ಶನ ಕಂಡು ಸುಳ್ಯದಲ್ಲಿ 115 ನೇ ಪ್ರದರ್ಶನವಾಗಿದೆ.

ಇಂದು ಚಾರುವಸಂತ

ಇಂದು ನಾಡೋಜ ಹಂಪನಾ ವಿರಚಿತ ದೇಸೀಕಾವ್ಯ ಚಾರುವಸಂತ ಪ್ರದರ್ಶನಗೊಳ್ಳಲಿದೆ. ರಾಜ್ಯಾದ್ಯಂತ ಸಂಚಲನ ಮೂಡಿಸಿದ , ಕನ್ನಡ ರಂಗಭೂಮಿಯ ಶ್ರೇಷ್ಟ ನಾಟಕ ಎಂಬ ಹೆಗ್ಗಳಿಕೆಗೆ ಪಾತ್ರವಾದ ಈ ನಾಟಕವನ್ನು ಡಾ.ನಾ.ದಾಮೋದರ ಶೆಟ್ಟಿಯವರು ರಂಗರೂಪಕ್ಕಿಳಿಸಿದ್ದಾರೆ. ವರ್ತಮಾನದ ಅನೇಕ ತಲ್ಲಣಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿ ಕಟ್ಟಲ್ಪಟ್ಟ ಚಾರುವಸಂತದ 24 ನೇ ಪ್ರದರ್ಶನ ರಂಗಮನೆಯಲ್ಲಿ ನಡೆಯಲಿದೆ.

ಎರಡೂ ನಾಟಕಕ್ಕೆ ಸೊಗಸಾದ ಸಂಗೀತವನ್ನು ಮಾ| ಮನುಜ ನೇಹಿಗ ಸುಳ್ಯ, ಸುಮನಾ ಪ್ರಸಾದ್, ಇನ್ಸಾಫ್ ಹೊಸಪೇಟೆ, ಗೀತಂ ಗಿರೀಶ್ ಉಡುಪಿ ಹಾಗೂ ಜೀವನ್ ರಾಂ ಸುಳ್ಯ ನೀಡಿದ್ದಾರೆ. ಸುಳ್ಯದ ವಾಮನ ಕೊಯಿಂಗಾಜೆ ವಸ್ತ್ರ ವಿನ್ಯಾಸ ಮಾಡಿದ್ದಾರೆ.